|
| ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ |
| ಖಾರ್ಟೌಮ್ (ಏಜೆನ್ಸಿ), ಭಾನುವಾರ, 11 ಮೇ 2008 ( 13:10 IST ) | |
ರಾಜಧಾನಿ ಖಾರ್ಟೌಮ್ ಮೇಲೆ ದಾರ್ಪುರ್ ಬಂಡುಕೋರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸುಡಾನ್ ಸರಕಾರ ಚಡ್ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ.
ಶನಿವಾರದಂದು, ಅಧಿಕಾರ ಪಡೆಯುವಾಗಿನ ಪ್ರಯತ್ನದಲ್ಲಿ ಖಾರ್ಟೌಮ್ ಉಪನಗರದಲ್ಲಿ ಬಂಡುಕೋರರು ಸುಡಾನ್ ಸೈನಿಕರ ಮೇಲೆ ದಾಳಿ ನಡೆಸಿದರು. ಅಧಿಕಾರಿಗಳು ಹೇಳುವಂತೆ ಈ ದಾಳಿಯನ್ನು ವಿಫಲಗೊಳಿಸಲಾಗಿದೆ.
ತಾವು ಚಡ್ ದೇಶದೊಂದಿಗಿನ ತಮ್ಮ ರಾಜಕೀಯ ಸಂಬಂಧವನ್ನು ಕಡಿದು ಹಾಕುತ್ತಿದ್ದೇವೆ ಎಂದು ಸುಡಾನ್ ಅಧ್ಯಕ್ಷ ಒಮರ್ ಹಸ್ಸನ್ ಅಲ್-ಬಶೀರ್ ಸರಕಾರಿ ಟಿವಿಯಲ್ಲಿ ತಿಳಿಸಿದ್ದಾರೆ.
ಬಂಡುಕೋರರ ಈ ದಾಳಿಗೆ ಚಡ್ ಪಡೆಗಳು ಬೆಂಬಲ ನೀಡುತ್ತಿದ್ದು, ಅವರುಗಳು ಕಲೀಲ್ ಇಬ್ರಾಹಿಂ ನಾಯಕತ್ವದಡಿ ಚಡ್ನಿಂದ ಸಂಚರಿಸಿದ್ದಾರೆ ಎಂದು ಬಶೀರ್ ಆರೋಪಿಸಿದರು. ಇಬ್ರಾಹಿಂ ಸುಡಾನಿನ ಪಶ್ಚಿಮಾತ್ಯ ದಾರ್ಪುರ್ ವಲಯದ ಬಂಡಾಯ ನ್ಯಾಯ ಮತ್ತು ಸಮಾನತೆ ಚಳುವಳಿಯ ನಾಯಕನಾಗಿದ್ದಾನೆ.
ದಾಳಿ ವೇಳೆ, ಭಾರಿ ಗುಂಡಿನ ಚಕಮಕಿ ಮತ್ತು ಫಿರಂಗಿ ದಾಳಿಗಳು ಒಮ್ಡುರ್ಮಾನ್ ಪ್ರದೇಶವನ್ನು ತಲ್ಲಣಗೊಳಿಸಿತು. ಕದನಕ್ಕಾಗಿ ಹೆಲಿಕಾಪ್ಟರ್ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಕಳುಹಿಸಲಾಗಿದ್ದು, ರಾತ್ರೋರಾತ್ರಿ ಕರ್ಫ್ಯೂವನ್ನು ಘೋಷಿಸಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|