|
| ಇನ್ನಾರು ತಿಂಗಳಲ್ಲಿ ಎಲ್ಟಿಟಿಇ ನಿರ್ಣಾಮ |
| ಕೊಲಂಬೊ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 08:46 IST ) | |
ದಶಕಗಳ ಕಾಲ ಶ್ರೀಲಂಕಾವನ್ನು ಕಾಡಿದ ಜಗತ್ತಿನ ಶಕ್ತಿಶಾಲಿ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾದ ಶ್ರೀಲಂಕಾದ ಎಲ್ಟಿಟಿಇ ಪಡೆಯನ್ನು ಇನ್ನಾರು ತಿಂಗಳುಗಳಲ್ಲಿ ನಿರ್ಣಾಮ ಮಾಡುವುದಾಗಿ ಶ್ರೀಲಂಕಾ ಸೇನಾ ಮುಖ್ಯಸ್ಥ ಶರತ್ ಪೊನ್ಸೇಕಾ ತಿಳಿಸಿದ್ದಾರೆ.
ಎಲ್ಟಿಟಿಇ ಉಗ್ರರ ಬೀಗಿ ಹಿಡಿತವಿರುವ ಉತ್ತರ ವನ್ನಾ ಪ್ರದೇಶಕ್ಕೆ ಬೇಟಿ ನೀಡಿ ಸೇನಾ ಕಾರ್ಯಾಚರಣೆಯ ಕಾರ್ಯ ಪರಿಶೀಲಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದು ಎಲ್ಟಿಟಿಇ ಸಂಘಟನೆಗೆ ಎಚ್ಚರಿಕೆಯ ಗಂಟೆಯಾಗಿದೆ.
ಇನ್ನಾರು ತಿಂಗಳುಗಳ ನಂತರ ಎಲ್ಟಿಟಿಇ ಸಂಘಟನೆಯು ಇರುವುದಿಲ್ಲ ಮತ್ತು ಅದರ ಮುಖ್ಯಸ್ಥನು ಕೂಡಾ ಬದುಕಿರುವುದಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ, ಲಂಕನ್ ಸೇನೆ ಈ ಪ್ರದೇಶದ ಮೇಲೆ ಸಾಧಿಸಿದ ಪ್ರಾಬಲ್ಯವನ್ನು ಒತ್ತಿ ಹೇಳಿದರು.
ಕಳೆದ ಆರು ತಿಂಗಳುಗಳಿಂದ ಇಚೆಗೆ ಲಂಕಾದಲ್ಲಿ ತಮಿಳು ಉಗ್ರರು ಮತ್ತು ಸೇನಾ ಪಢೆ ಮಧ್ಯೆ ಭಾರಿ ಪ್ರಮಾಣದಲ್ಲಿ ಕದನಗಳು ಜರುಗಿದ್ದು, ಲಂಕನ್ ಸೇನೆ ಉಗ್ರರ ಪಡೆಯನ್ನು ಹಂತ ಹಂತವಾದಿ ಹತ್ತಿಕ್ಕುವಲ್ಲಿ ಸಫಲವಾಗಿದೆ.
"ಎಲ್ಟಿಟಿಇ ಪಡೆಯಲ್ಲಿ ಇದೀಗ ಕೇವಲ 3 ಸಾವಿರ ಉಗ್ರರು ಮಾತ್ರ ಇದ್ದಾರೆ. ನಮ್ಮ ದಾಳಿಯಿಂದಾಗಿ ಅವರೆಲ್ಲರು ತಮ್ಮ ಪ್ರಾಣ ಉಳಿಸಿಕೊಳ್ಳುವುದು ತುಂಬಾ ದುಸ್ತರವಾಗಿದೆ ಮತ್ತು ಈ ಸಂಘಟನೆಯ ಪರಮೋಚ್ಛ ನಾಯಕ ವೆಲುಪಿಳ್ಳೆ ಪ್ರಭಾಕರನ್ ಅವರ ಮೇಲೆ ವಾಯು ದಾಳಿ ನಡೆಸಲು ವಾಯುಸೇನೆ ಸಿದ್ಧತೆಗಳನ್ನು ನಡೆಸಿದ್ದರಿಂದ ಅವರು ಇನ್ನಾರು ತಿಂಗಳಲ್ಲಿ ನಿರ್ಣಾಮವಾಗಲಿದ್ದಾರೆ" ಎಂದು ಸೇನಾಧ್ಯಕ್ಷರು ಹೇಳಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|