ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
3ರೂ.ಗೆ ಅಕ್ಕಿ-ಬೇಡಿಕೆ ಈಡೇರಿಕೆಗೆ 1ಲಕ್ಷ ಕೋಟಿ ರೂ.ಬೇಕು!
ನವದೆಹಲಿ, ಬುಧವಾರ, 20 ಮೇ 2009   ( 18:09 IST )
ಲೋಕಸಭೆ ಚುನಾವಣಾ ಸಮರ ಮುಕ್ತಾಯ ಕಂಡಿದೆ. ಜೊತೆಗೆ ಜನಾದೇಶದ ಸ್ಪಷ್ಟ ತೀರ್ಪು ಹೊರ ಬಿದ್ದಿದ್ದು, ಯುಪಿಎ ಮತ್ತೊಮ್ಮೆ ಗದ್ದುಗೆ ಏರುವುದು ಸ್ಪಷ್ಟವಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಭರವಸೆ ಕೊಟ್ಟ ಪ್ರಣಾಳಿಕೆಯ ಬೇಡಿಕೆ ಈಡೇರಿಸಬೇಕಾಗಿದೆ. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಯುಪಿಎ 1ಲಕ್ಷ ಕೋಟಿ ರೂ.ಧನಸಹಾಯ ನೀಡಬೇಕಾಗಿದೆ!.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಬಡತನ ರೇಖೆಗಿಂತ ಕೆಳಗಿರುವವರಿಗೆ 3ರೂ.ಗೆ 25ಕೆ.ಜಿ.ಅಕ್ಕಿ ಅಥವಾ ಗೋಧಿ ನೀಡುವ ಭರವಸೆ ನೀಡಿತ್ತು. ಆ ನಿಟ್ಟಿನಲ್ಲಿ ಯುಪಿಎ ಭರವಸೆ ಈಡೇರಿಕೆಗೆ ಮುಂದಿನ 5ವರ್ಷಗಳಲ್ಲಿ ಸುಮಾರು 1ಲಕ್ಷ ಕೋಟಿ ರೂ. ವೆಚ್ಚ ಭರಿಸಬೇಕಾಗಿದೆ.

ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬ ಬಡವನಿಗೂ 3ರೂ.ಗೆ 25ಕೆ.ಜಿ.ಅಕ್ಕಿ ಕೊಡುವುದಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಪ್ರಸ್ತುತ ರಾಜ್ಯ ಸರ್ಕಾರಗಳು ಈಗಾಗಲೇ ಸುಮಾರು 8.13ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅಲ್ಲದೇ ಇಷ್ಟು ಮಂದಿಗೆ ಪ್ರತಿವರ್ಷ 243.9ಲಕ್ಷ ಟನ್ ಆಹಾರ ಒದಗಿಸಬೇಕಾಗುತ್ತದೆ!.

ಆ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 8.13ಕೋಟಿ ಕುಟುಂಬಗಳಿಗೆ ಇಷ್ಟು ಪ್ರಮಾಣದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆಹಾರ ಒದಗಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಯುಪಿಎ ನಿರ್ಧಾರ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ 1,00,000 ಕೋಟಿ ರೂ.ಗಳಷ್ಟು ಹೊರೆ ಬೀಳಲಿದೆ. ಅಲ್ಲದೇ 1,100ಕ್ವಿಂಟಾಲ್ ಆಹಾರವನ್ನು ಖರೀದಿಸಬೇಕಾಗಿದೆ.

ಆದರೆ 2.43ಕೋಟಿ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿದ್ದು, ಇವರೆಲ್ಲ ಕೇಂದ್ರ ಘೋಷಿಸಿದ ಪ್ರಣಾಳಿಕೆಯಡಿಯಲ್ಲಿ ಬರುತ್ತಾರೆಯೇ ಎಂಬುದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿಲ್ಲ. ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಈ ಕುಟುಂಬಗಳು ಪ್ರಸ್ತುತವಾಗಿ 2ರೂ.ಕೆಜಿ ಗೋಧಿ ಹಾಗೂ 3ರೂ.ಗೆ ಅಕ್ಕಿಯನ್ನು ಪಡೆಯುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ
ಆರಂಭಿಕ ವಹಿವಾಟು: 220 ಅಂಕ ಕುಸಿದ ಸೂಚ್ಯಂಕ
ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಂಭವ: ಸಿಎಂಐಇ
ಸೆನ್ಸೆಕ್ಸ್: ಆರಂಭಿಕ ವಹಿವಾಟು ಕುಸಿತ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...