|
| ಶ್ರೀಮಂತ ರಾಷ್ಟ್ರಗಳ ವಿರುದ್ಧ ಜಿ-5 ರಾಷ್ಟ್ರ ತರಾಟೆ |
| ಸಪ್ಪೊರೊ, ಬುಧವಾರ, 9 ಜುಲೈ 2008 ( 09:51 IST ) | |
ಇಳಿಮುಖ ಗೊಳ್ಳುತ್ತಿರುವ ಆರ್ಥಿಕತೆ, ಏರುತ್ತಿರುವ ಆಹಾರ ಮತ್ತು ತೈಲ ಬೆಲೆಗಳಿಂದ ಚಿಂತಾಕ್ರಾಂತರಾಗಿರುವ ಭಾರತವನ್ನೊಳಗೊಂಡ 5 ಹೊರಹೊಮ್ಮುತ್ತಿರುವ ಆರ್ಥಿಕತೆಗಳು, ವ್ಯಾಪಾರ ಸಹಾಯಧನ ಮುಖಾಂತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆಹಾರ ಉತ್ಪಾದನೆಗೆ ತಡೆಯೊಡ್ಡುತ್ತಿರುವ ಶ್ರೀಮಂತ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿದೆ.
ತಮ್ಮ ಸಭೆಯಲ್ಲಿ ರಾಜಕೀಯ ಘೋಷಣೆಯನ್ನು ಅಳವಡಿಸಿದ ಭಾರತ, ಚೀನಾ, ಬ್ರೆಸಿಲ್, ದ.ಆಫ್ರಿಕಾ, ಮೆಕ್ಸಿಕೋ ನಾಯಕರು ಅಭಿವೃದ್ಧಿತ ರಾಷ್ಟ್ರಗಳಲ್ಲಿ, 2020ರ ವೇಳೆಗೆ ಕ್ಯೋಟೋ ಪ್ರೊಟೊಕಾಲ್ ಬದ್ಧತೆಯನ್ನು ಪೂರೈಸಲು ಮತ್ತು ಹಸಿರು ಮನೆ ಪರಿಣಾಮವನ್ನು 25-40ಶೇ. ದಷ್ಟು ತಗ್ಗಿಸಲು ಕರೆ ನೀಡಿದರು.
ಹಣಕಾಸು ಅನಿಶ್ಚಿತತೆ, ವ್ಯಾಪಾರ ಸುರಕ್ಷತಾ ವಿರೂಪತೆಯ ಮುಂದುವರಿಕೆ, ಏರುತ್ತಿರುವ ಆಹಾರ ಮತ್ತು ತೈಲ ಬೆಲೆ ಮತ್ತು ಹವಾಮಾನ ಬದಲಾವಣೆ ಒಡ್ಡುತ್ತಿರುವ ಅಪಾಯದಿಂದ ಉದ್ಬವಿಸಿರುವ ಜಾಗತಿಕ ಆರ್ಥಿಕ ಇಳಿಮುಖದ ಅಂತರ್ ಸಂಬಧ ಪ್ರಸಕ್ತ ಘಟನಾವಳಿಯನ್ನು ಸಂಕೀರ್ಣಗೊಳಿಸಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
ಜಾಗತಿಕ ಆಹಾರ ಬೆಲೆ ಏರಿಕೆ ಬಡತನ ಮತ್ತು ಹಸಿವು ವಿರುದ್ಧದ ಹೋರಾಟಕ್ಕೆ ಒಂದು ಹೊಸ ಸವಾಲನ್ನು ಒಡ್ಡಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬಹು ಮಿಲಿಯ ಕೃಷಿ ಮತ್ತು ವ್ಯಾಪಾರ ವಿರೂಪತೆ ಬೆಂಬಲ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆಹಾರ ಉತ್ಪಾದನೆ ಸಾಮರ್ಥ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|