ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಗುರುಭಕ್ತಿ
- ಡಾ| ವಿ. ಗೋಪಾಲಕೃಷ್ಣ
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.

ಮರಾಠರ ಸಾರ್ವಭೌಮ ಶಿವಾಜಿ ಸಮರ್ಥ ರಾಮದಾಸರನ್ನು ತನ್ನ ಗುರುವೆಂದು ಪರಿಗಣಿಸಿದ್ದನು. ಒಂದು ದಿನ ತನ್ನ ಗುರುದೇವರು ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದು ಭಿಕ್ಷೆ ಬೇಡುತ್ತಿರುವುದನ್ನು ಮಹಡಿಯ ಮೇಲಿದ್ದ ಶಿವಾಜಿ ನೋಡಿದ. ರಾಜನ ಮನಸ್ಸಿಗೆ ತುಂಬಾ ನೋವುಂಟಾಯಿತು. ನನ್ನ ಸರ್ವ ಸಂಪತ್ತನ್ನೂ ಗುರುದೇವನಿಗಾಗಿ ಖರ್ಚು ಮಾಡಲು ನಾನು ಸಿದ್ಧನಾಗಿದ್ದೇನೆ. ಹೀಗಿರುವಾಗ ಅವರು ಅದೇಕೆ ಮನೆಮನೆಗೂ ಹೋಗಿ ಭಿಕ್ಷೆ ಬೇಡಬೇಕು ಎಂದು ಯೋಚಿಸಿದ ಶಿವಾಜಿ.

ಜ್ಞಾನಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಶಿವಾಜಿಗೆ ಮನವರಿಕೆಯಾಯಿತು. ಒಂದು ಚೀಟಿಯಲ್ಲಿ ಏನನ್ನೋ ಬರೆದ ಶಿವಾಜಿ ತನ್ನ ಸ್ನೇಹಿತ ಬಾಲಾಜಿಯನ್ನು ಕರೆದು, ಗುರುದೇವರು ಅರಮನೆಗೆ ಬಂದಾಗ ಈ ಚೀಟಿಯನ್ನು ಅವರ ಬಳಿ ಕೊಡು ಎಂದು ಹೇಳಿದರು. ಮಧ್ಯಾಹ್ನವಾಯಿತು. ರಾಮದಾಸರು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ಅರಮನೆಯ ಬಾಗಿಲ ಬಳಿ ಬಂದು ನಿಂತರು. ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಬಾಲಾಜಿ ಆ ಚೀಟಿಯನ್ನು ಅವರ ಕೈಗೆ ಕೊಟ್ಟ ಅದನ್ನು ತೆಗೆದು ನೋಡಿದರು ಗುರುದೇವರು.

ಅದರಲ್ಲಿ ಈ ಮಹಾ ಸಾಮ್ರಾಜ್ಯವನ್ನು ಇಡಿಯಾಗಿ ಗುರುದೇವರಿಗೆ ಸಮರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ಅವರ ಆಶಿರ್ವಾದವನ್ನು ಕೋರಿ ನಿಂತಿದ್ದೇನೆ ಎಂದು ಬರೆಯಲಾಗಿತ್ತು. ಬಾಲಾಜಿಯನ್ನು ನೋಡಿ ಮುಗುಳ್ನಗೆ ನಗುತ್ತಾ ಅವರು, ಸರಿ ಎಂದು ಹೇಳಿ ಅಲ್ಲಿಂದ ಹೊರಟರು. ಮಾರನೆಯ ದಿನ ಶಿವಾಜಿಯನ್ನು ಕಂಡ ಅವರು, ನಿನ್ನ ರಾಜ್ಯವನ್ನೆಲ್ಲಾ ನನಗೆ ಕೊಟ್ಟಿರುವೆಯಲ್ಲವೆ, ಇನ್ನು ನೀನು ಏನು ಮಾಡುತ್ತಿ ಎಂದು ಕೇಳಿದರು. ಗುರುದೇವರ ಪಾದಪದ್ಮಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದ ಶಿವಾಜಿ, ತಮ್ಮ ಸೇವೆಯಲ್ಲಿ ಕಾಲಕಳೆಯಲು ಅವಕಾಶ ದೊರೆತರೆ ಸಂತೋಷಪಡುತ್ತೇನೆ ಎಂದನು.

ನನ್ನ ಭಿಕ್ಷಾಪಾತ್ರೆಯನ್ನು ತೆಗೆದುಕೋ ನಾವಿಬ್ಬರೂ ಭಿಕ್ಷೆ ಬೇಡಲು ಹೋಗೋಣ ಎಂದರು ರಾಮದಾಸರು. ಇಬ್ಬರೂ ನಗರದ ಬೀದಿಗಳಲ್ಲಿ ಅಲೆದಾಡಿ ಭಿಕ್ಷೆ ಬೇಡಿದರು. ಇವರಿಬ್ಬರನ್ನು ಕಂಡ ಪ್ರಜೆಗಳು ಭಕ್ತಿಯಿಂದ ನಮಸ್ಕರಿಸಿ ಅಕ್ಕಿಯನ್ನು ಭಿಕ್ಷೆಯಾಗಿ ನೀಡಿದರು. ರಾಮದಾಸರು ಅದನ್ನು ಬೇಯಿಸಿ ಊಚ ಮಾಡಿದರು. ಉಳಿದಿದ್ದ ಅನ್ನವನ್ನು ಶಿವಾಜಿ ತಿಂದನು.

ಗುರುದೇವಾ, ದಾಸನನ್ನು ಭಿಕ್ಷೆ ಬೇಡುವಂತೆ ಮಾಡಿದ್ದೀರಿ. ಇನ್ನು ಏನೇನು ಮಾಡಿಸಬೇಕೆಂದಿದ್ದೀರಿ ಎಂದು ನಗುತ್ತಲೇ ಕೇಳಿದ ಶಿವಾಜಿ. ಕೂಡಲೆ ರಾಮದಾಸರು, ಶಿವಾಜಿ, ಒಂದು ಮಹತ್ತರವಾದ ಗುರಿಯನ್ನು ಸಾಧಿಸಲು ತಕ್ಕ ಸಮಯ ಈಗ ಒದಗಿ ಬಂದಿದೆ. ಅದಕ್ಕೆ ಸರಿಯಾದವನು ನೀನು ಇಂದಿನಿಂದ ನೀನು ಈ ರಾಜ್ಯವನ್ನು ನನ್ನ ಹೆಸರಿನಲ್ಲಿ ಆಳಬೇಕು. ಕಾವಿಯ ಬಾವುಟವನ್ನು ಚಿಹ್ನೆಯಾಗಿರಿಸಿಕೊಂಡು ಕಾವಿಬಣ್ಣದ ಹಿರಿಮೆಯನ್ನು ಜೀವನಪರ್ಯಂತ ರಕ್ಷಿಸಿಕೊಂಡು ಬರಬೇಕು.

ಭಗವಂತನ ಪ್ರತಿನಿಧಿಯಾಗಿ ನಿಂತು ಈ ದೇಶವನ್ನು ಸರಿಯಾದ ರೀತಿಯಲ್ಲಿ ನ್ಯಾಯವಾಗಿ ಆಳಬೇಕು ಎಂದರು. ಅಂತೆಯೇ ಮಹಾರಾಜ ಶಿವಾಜಿ ಗುರು ರಾಮದಾಸರ ಪಾದುಕೆಗಳನ್ನು ಮಣೆಯ ಮೇಲಿಟ್ಟು ಅವರ ಹೆಸರಿನಲ್ಲಿಯೇ ಆಡಳಿತ ಪ್ರಾರಂಭಿಸಿದ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಗುರುಗಳ ಭಕ್ತಿ
ಊಟವೇ ಉಪದೇಶ
ಮಹಾನ್ ಧರ್ಮ
ದುಡಿದರೆ ಮಾತ್ರ ಊಟ
ತ್ಯಾಗಜ್ಯೋತಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace