ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಆರೋಗ್ಯ ಚಿಕಿತ್ಸೆ
ಕೂದಲಿನ ಆರೋಗ್ಯಕ್ಕಾಗಿ ಕೆಲವು ಸಲಹೆಗಳು
ಗುರುವಾರ, 6 ಡಿಸೆಂಬರ್ 2007   ( 18:53 IST )
1. ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ. ಉತ್ತಮ ಗುಣಮಟ್ಟದ ಬ್ರಷ್ ಅಥವಾ ಬಾಚಣಿಗೆಯನ್ನು ಬಳಸಿ. ಕೂದಲು ತೊಳೆದ ನಂತರ ಹತ್ತು ಹದಿನೈದು ನಿಮಿಷಗಳ ಕಾಲ ಕೂದಲು ಬುಡಗಳನ್ನು ಬೆರಳಿನಿಂದ ಮಸಾಜ್ ಮಾಡಿ. ಇದು ರಕ್ತಸಂಚಲನೆ ಸುಗಮವಾಗಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೇರುಗಳಿಗೆ ಶಕ್ತಿಯನ್ನು ನೀಡುತ್ತದೆ.

2. ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ತೆಂಗಿನ ಹಾಲನ್ನು ಹಾಕಿ ಮಸಾಜ್ ಮಾಡಿ. ಅರ್ಧಗಂಟೆ ಕಳೆದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ಬಾರಿ ಇದನ್ನು ಆವರ್ತಿಸಿ.

3.ಮೊಟ್ಟೆಯ ಹಳದಿಯನ್ನು ಜೇನಿನೊಂದಿಗೆ ಬೆರೆಸಿ ಮಸಾಜ್ ಮಾಡಿ ಅರ್ಧಗಂಟೆಯನಂತರ ತೊಳೆದರೆ ಕೂದಲು ದಟ್ಟವಾಗುತ್ತದೆ.

3.ಬಾದಾಮಿ ಎಣ್ಣೆಯಿಂದ ಮೂರು ನಾಲ್ಕು ಬಾರಿ ನೆತ್ತಿಯನ್ನು ಮಸಾಜ್ ಮಾಡಿದರೆ ಕೂದಲುದುರುವಿಕೆಯು ಕಡಿಮೆಯಾಗುತ್ತದೆ.

4. ಬೊಕ್ಕತಲೆಯಿದ್ದರೆ ಅಲ್ಲಿಗೆ ನೀರುಳ್ಳಿ ರಸವನ್ನು ಚೆನ್ನಾಗಿ ತಿಕ್ಕಿ, ತದನಂತರ ಜೇನನ್ನು ಲೇಪಿಸುವುದರಿಂದ ಕೂದಲು ಬೆಳೆಯುವುದು.

5. ಸಮಾನ ಪ್ರಮಾಣದಲ್ಲಿ ಬೆಚ್ಚಗಿನ ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ವಾರಕ್ಕೊಂದು ಬಾರಿ ಹಚ್ಚಿ ಮಸಾಜ್ ಮಾಡಿದರೆ ಕೂದಲು ಉದ್ದವಾಗುವುದು.

6. ನೆಲ್ಲಿಕಾಯಿಯ ಹುಡಿಯೊಂದಿಗೆ ಮೊಟ್ಟೆಯನ್ನು ಸೇರಿಸಿ ಹಚ್ಚಿ ಅರ್ಧಗಂಟೆಯ ನಂತರ ತೊಳೆದರೆ ಕೂದಲು ನಯವಾಗುತ್ತದೆ.

7. ಲಿಂಬೆಹಣ್ಣಿನ ರಸವನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

8. ಲಿಂಬೆ ಬೀಜ ಮತ್ತು ಕರಿಮೆಣಸಿನ ಕಾಳನ್ನು ಸಮ ಪ್ರಮಾಣದಲ್ಲಿ ಪುಡಿಮಾಡಿ, ಅಲ್ಪ ನೀರು ಸೇರಿಸಿ ನೆತ್ತಿಗೆ ಹಚ್ಚುವುದರಿಂದ ಬೊಕ್ಕತಲೆ ನಿವಾರಣೆಯಾಗುತ್ತದೆ.

9. ಬಿಸಿ ಆಲಿವ್ ಎಣ್ಣೆ, ಜೇನು ಮತ್ತು ಒಂದು ಟೀ ಚಮಚ ದಾಲ್ಚೀನಿ ಹುಡಿಯನ್ನು ನೀರಿನೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ.

10. ಕೊತ್ತಂಬರಿ ಸೊಪ್ಪಿನ ರಸವನ್ನು ನೆತ್ತಿಗೆ ಹಚ್ಚುವುದರಿಂದ ನೆತ್ತಿಗೆ ತಂಪಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

11.ನಾಲ್ಕು ಟೀ ಚಮಚ ಮದರಂಗಿ ಎಲೆಯೊಂದಿಗೆ 1 ಕಪ್ ಸಾಸಿವೆ ಎಣ್ಣೆಯನ್ನು ಕುದಿಸಿ. ತಣಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಇದನ್ನು ದಿನಾ ಹಚ್ಚುವುದರಿಂದ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯುತ್ತದೆ.

12.ಬಾಳೆಹಣ್ಣಿನ ರಸಾಯನ, ಜೇನು, ಮೊಸರು, ಮತ್ತು ಕೆನೆಹಾಲನ್ನು ಸೇವಿಸಿದರೆ ಕೂದಲು ಬೆಳೆಯುತ್ತದೆ.

13.ದಿನವೂ ಜೀರಿಗೆ ಅಥವಾ ಕೊತ್ತಂಬರಿ ನೀರಿನ ಸೇವನೆ ಕೂದಲಿನ ಪೋಷಣೆಗೆ ಅತ್ಯುತ್ತಮ.

14.ಕೂದಲು ಬಣ್ಣಗೆಟ್ಟಿದ್ದರೆ ಅಥವಾ ಅತಿಯಾಗಿ ಉದುರುತ್ತಿದ್ದರೆ ಕ್ಯಾರೆಟ್ ರಸವನ್ನು ಸೇವಿಸುವುದು ಒಳ್ಳೆಯದು.

15.ಮದರಂಗಿಯನ್ನು ಮೊಟ್ಟೆಯೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಮತ್ತು ಶಕ್ತಿ ದೊರೆಯುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನೋವು ನಿವಾರಕ ಅಕ್ಯುಪೆಂಚರ್ ಚಿಕಿತ್ಸೆ
ಬಿ ವಿಟಮಿನ್ ಕೊರತೆಯಿಂದ ಬೆರಿಬೆರಿ
ಮೊಡವೆ ಬೇಡ ಗೊಡವೆ
ಎಲ್‌ಐಸಿಯಿಂದ ಆರೋಗ್ಯ ವಿಮೆ ಶೀಘ್ರದಲ್ಲಿ ಜಾರಿ
ಚಂಡೀಗಢ: ವ್ಯಾಪಿಸಿದ ಡೆಂಗ್ಯೂ ಜ್ವರ- 2 ಬಲಿ
ಅಧಿಕ ರಕ್ತದೊತ್ತಡ: ನಿರ್ಲಕ್ಷಿಸಿದರೆ ಅಪಾಯ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
NRB
 
ಕನ್ನಡ ಮನಸುಗಳ ತಣಿಸಿದ ನುಡಿಸಿರಿ
ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ...
'ಆಶ್ಚರ್ಯ' ಶಬ್ದದ ನಿಜಾರ್ಥ ಗೊತ್ತಾಗಿದ್ದು ನುಡಿಸಿರಿಯಲ್ಲಿ..!
ಮೌಲ್ಯ ಬಿಟ್ಟು ಪ್ರಸಿದ್ಧಿ ಬಯಸದಿರಿ: ಯುವಕರಿಗೆ ಆಳ್ವಾ ಕಿವಿಮಾತು
ವಾಣಿಜ್ಯ
ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ
ಮುಂದೆ ಓದಿ|ಮತ್ತಷ್ಟು...
Marketplace