ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ಸ್ಫಟಿಕ ಚಿಕಿತ್ಸೆ: ತರಬೇತಿ ಅಗತ್ಯ
ಸೋಮವಾರ, 17 ಸೆಪ್ಟೆಂಬರ್ 2007   ( 16:17 IST )
ನೀವು ಸ್ಪಟಿಕ ಚಿಕಿತ್ಸೆಯ ಕುರಿತು ಕೇಳಿದ್ದೀರಾ? ಸ್ಫಟಿಕಕ್ಕೆ ಯಂತ್ರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಹಾಗೂ ವಿದ್ಯುತ್ ಶಕ್ತಿಯನ್ನು ಯಂತ್ರಶಕ್ತಿಯನ್ನಾಗಿ ಪರಿವರ್ತಿಸುವ ವಿಶೇಷ ಗುಣವಿದೆ. ಸ್ಫಟಿಕ ಚಿಕಿತ್ಸೆ ಕೂಡ ಇದೇ ವಿಜ್ಞಾನದ ತಳಹದಿಯ ಮೇಲೆ ರೂಪುಗೊಂಡಿದೆ. ಎಲ್ಲ ವಸ್ತುಗಳಂತೆ (ಕ್ರಿಸ್ಟಲ್) ಸ್ಪಟಿಕಗಳಿಗೆ ತಮ್ಮ ಸುತ್ತಲೂ ಶಕ್ತಿ ಕ್ಷೇತ್ರಗಳಿರುತ್ತವೆ. ಇದನ್ನು "ಪ್ರಭಾವಲಯ" ಎಂದೂ ಕರೆಯುತ್ತಾರೆ.

ಭೂಮಿಗೂ ನಮ್ಮ ಬದುಕಿಗೂ ನೇರ ಸಂಬಂಧವಿರುವಂತೆ, ಸ್ಫಟಿಕ ಶಿಲೆಯಾಗಿ ರೂಪುಗೊಂಡ ವಸ್ತುಗಳು ಕೂಡ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ನೀವು ಗಮನಿಸಿರಬಹುದಾದ ಬೆಣಚು ಕಲ್ಲು ಅಥವಾ ಕ್ಷಾರ್ಜ ಇಂಥ ಸ್ಫಟಿಕಕ್ಕೆ ಮಾದರಿ. ಸ್ಫಟಿಕ ಚಿಕಿತ್ಸೆ ಪರ್ಯಾಯ ಚಿಕಿತ್ಸಾ ವಿಧಾನಗಳಲ್ಲಿ ಅತ್ಯಂತ ಮುಂದುವರೆದ ಚಿಕಿತ್ಸೆಗಾಗಿದೆ.

ಆದರೆ ಸ್ಫಟಿಕ ಚಿಕಿತ್ಸೆಯನ್ನು ಸೂಕ್ತ ತರಬೇತಿ ಇಲ್ಲದೆ ಯಾರೂ ಯಾರ ಮೇಲೂ ಪ್ರಯೋಗಿಸಬಾರದು. ಗುರುಗಳ ಮಾರ್ಗದರ್ಶನವಿಲ್ಲದೆ, ಈ ವಿದ್ಯೆಯನ್ನು ಪ್ರಯೋಗಿಸಲು ಹೋದರೆ, ಶಕ್ತಿ ಕೇತ್ರದಲ್ಲಿ ಪಲ್ಲಟನ ಉಂಟಾಗಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳೂ ಇರುತ್ತವೆ.

ನೀವು ಅಂಗೈಗೆ ಹರಳು ಧರಿಸುವುದಿಲ್ಲವೇ? ಅದರ ಬಣ್ಣ ಧರಿಸುವ ಬೆರಳು, ಹರಳು ಪ್ರತಿಯೊಂದು ಹೇಗೆ ಮುಖ್ಯವೂ ಈ ಚಿಕಿತ್ಸೆಯಲ್ಲಿ ಕೂಡ, ಹರಳಿನ ಶುದ್ಧತೆ, ಸ್ವಚ್ಚತೆ, ಮತ್ತು ಶಕ್ತಿ ಅತಿ ಮುಖ್ಯಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಸ್ವಚ್ಚವಾದ ಸ್ಫಟಿಕದ ತುಕಡಿಯೊಂದನ್ನು ತೆಗೆದುಕೊಂಡು, ಶುದ್ಧೀಕರಿಸಿದ ಉಪ್ಪುನೀರಿನಲ್ಲಿ ಪರಸ್ಪರ ಸಮೀಪಕ್ಕೆ ತಂದರೆ, ಇವೆರಡು ಶಕ್ತಿ ಕೇತ್ರಗಳು ಒಂದಕ್ಕೊಂದು ಸಂಧಿಸುತ್ತದೆ. ಯೋಗ್ಯ ರೀತಿಯಲ್ಲಿ ಪ್ರಯೋಗ ಮಾಡಿದರೆ ನಮ್ಮ ಶಕ್ತಿ ಕ್ಷೇತ್ರವನ್ನು ಸ್ವಚ್ಛಗೊಳಿಸಲು, ಶಕ್ತಿ ತುಂಬಲು ಸ್ಫಟಿಕದಿಂದ ಸಾಧ್ಯ.

ಸ್ಫಟಿಕವನ್ನು ಕೆಲವರು ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಂಡು ಮಲಗುತ್ತಾರೆ. ಇನ್ನು ಕೆಲವರು ಅಂಗೈಯಲ್ಲಿಟ್ಟುಕೊಂಡು ಇಷ್ಟಾರ್ಥ ಸಿದ್ಧಿಗಾಗಿ ಧ್ಯಾನಿಸುತ್ತಾರೆ. ಸ್ಪಟಿಕ ಬಳಸಿ ಯಾವುದೇ ಪ್ರಯೋಗಕ್ಕೆ ಮುಂದಾಗುವ ಮೊದಲು ಅದರ ಕುರಿತು ಸೂಕ್ತ ತರಬೇತಿ ಅಗತ್ಯ. ಇಲ್ಲದಿದ್ದರೆ ಅಪಾಯ ಎದುರಿಸಬೇಕಾಗುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಭಾಯಕಾಯ ಚಿಕಿತ್ಸೆ
ರೇಖೆಗಳ ಮೂಲಕ ರೇಖಿ ಚಿಕಿತ್ಸೆ
ಹಿಪ್ನೊಥೆರಪಿ: ಶ್! ಸುಪ್ತ ಮನಸ್ಸು ಮಾತನಾಡುತ್ತಿದೆ!
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
ಕಫ ನಿವಾರಣೆಗೆ ಉಗಿ ಚಿಕಿತ್ಸೆ
ನಿಶ್ಚಿಂತೆಯ ಜೀವನಕ್ಕೆ ನಿಸರ್ಗ ಚಿಕಿತ್ಸೆ
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace