|
| ಶರೀರಕ್ಕೆ ಚೈತನ್ಯ ನೀಡುವ ಸ್ನಾನ..! |
ದಿನನಿತ್ಯ ಮಾಡುವ ಒಂದು ಸಹಜ ಪ್ರಕ್ರಿಯೆ ಸ್ನಾನ. ಅದರಲ್ಲೇನು ವಿಶೇಷ ಎನ್ನುತ್ತೀರಾ? ವಿಶೇಷ ಇದೆ. ಬಹಳಷ್ಟು ಜನರಿಗೆ ಸ್ನಾನದ ಮಹತ್ವ ಹಾಗೂ ಉದ್ದೇಶ ತಿಳಿದಿಲ್ಲ. ನಾಲ್ಕು ಚಂಬು ನೀರು ಸುರುವಿ, ಶಾಸ್ತ್ರ ಮುಗಿಸಿದರೆ ಸಾಕು ಅನ್ನುವವರೇ ಹೆಚ್ಚು.
ದೇಹವನ್ನು ಸ್ಪಚ್ಟವಾಗಿರಿಸುವುದು ಹಾಗೂ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವುದು ಸ್ನಾನದ ಪ್ರಮುಖ ಉದ್ದೇಶಗಳು. ನೀರು ಒಂದು ಸ್ವಚ್ಚಕಾರಕ. ದೇಹದ ಚರ್ಮದಲ್ಲಿ ಅಡಗಿರುವ ಮಿಲಿಯನ್ಗಟ್ಟಲೆ ರಂಧ್ರಗಳ ಮೂಲಕ ಚರ್ಮ ಉಸಿರಾಡುತ್ತದೆ. ಈ ರಂಧ್ರಗಳಲ್ಲಿ ಅಡಗಿರುವ ಕೊಳೆಯನ್ನು ಸ್ನಾನ ನಿವಾರಿಸುತ್ತದೆ. ಸ್ನಾನ ಮಾಡಿ ಮೈ ಒರೆಸುವಾಗ ಒಂದು ನವಿರಾದ ಅನುಭವಕ್ಕೊಳಗಾದರೆ ಅದು ರಕ್ತ ಪರಿಚಲನೆ ಚರುಕುಗೊಂಡ ಸೂಚನೆ.
ಸ್ನಾನದಿಂದ ನಮ್ಮ ಚರ್ಮದ ರಂಧ್ರಗಳಲ್ಲಿ ಅಡಗಿರುವ ಕೊಳೆ ಹೊರಬಂದು ಶರೀರ ಶುಚಿಯಾಗುವುದಲ್ಲದೆ, ದೇಹಕ್ಕೆ ಚೈತನ್ಯ ನೀಡುತ್ತದೆ. ನಿಂಬೆ ರಸ ಬೆರೆಸಿದ ಉಗುರು ಬೆಚ್ಚಗಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು. ಅತಿ ಬಿಸಿ ನೀರಿನ ಸ್ನಾನ ಅಪಾಯಕಾರಿ. ಆದರೆ ರಾತ್ರಿ ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಬಿಸಿ ನೀರು ಸ್ನಾನದಿಂದ ಹಲವು ಪ್ರಯೋಜನಗಳಿವೆಯಾದರೂ, ತಣ್ಣೀರು ಸ್ನಾನ ಮಾಡುವುದೊಳಿತು. ತಣ್ಣೀರು ಸ್ನಾನವನ್ನು ಉಟಕ್ಕೆ ಮೂರು ಗಂಟೆಗಳ ಮೊದಲು ಅಥವಾ ಊಟವಾದ ನಂತರ ಮೂರು ಗಂಟೆಗಳ ನಂತರ ಮಾಡಬೇಕು.
ಸ್ನಾನ ಮಾಡುವ ಮೊದಲು ಶರೀರದ ಎಲ್ಲಾ ಭಾಗಗಳನ್ನು ಅಂಗೈ ಅಥವಾ ಭಟ್ಟೆಯಿಂದ ಮೃದು ಒತ್ತಡ ಹಾಕಿ ಮೂಲಕ ಉಜ್ಜುವುದು ಒಳ್ಳೆಯುದು. ಲಘು ವ್ಯಾಯಾಮ ಮಾಡಿ ಬೆರಳಿದ ನಂತರ ಸಾವಧಾನವಾಗಿ ಸ್ನಾನ ಮಾಡುವುದು ಇನ್ನೂ ಉತ್ತಮ. ಸ್ನಾನ ಮಾಡುವಾಗ ಅವರಸದಿಂದ ಮಾಡದೆ ದೇಹದ ಪ್ರತಿಯೊಂದು ಭಾಗಗಳಿಗೂ ನಮ್ಮ ಅಂಗೈಯಿಂದ ತಿಕ್ಕಿ ಮಸಾಜ್ ಮಾಡುವುದರಿಂದ ಶರೀರದ ನವೆ, ತುರಿಕೆ, ಅಲರ್ಜಿ, ಮುಖದ ಮೇಲೆ ಮೊಡವೆ ಏಳುವುದು ಮುಂತಾದ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಸ್ನಾನದಿಂದ ದೇಹ ಶುಚಿಯಾಗಿರುವುದಲ್ಲದೆ, ಮನಸ್ಸೂ ಆಹ್ಲಾದಕರವಾಗಿರುತ್ತದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ. |
| |
|
|
|
|
 | | AP |
| | |
| |
|
|
|
|
|
| ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು. |
| |
|
|
|
|
|
|
|