ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ಹೊಗೆ ಮಾಲಿನ್ಯ ಮಕ್ಕಳಿಗೆ ಮಾರಕ
ಮಂಗಳವಾರ, 18 ಡಿಸೆಂಬರ್ 2007   ( 21:52 IST )
ವಾಹನಗಳು ಹೊರಬಿಡುವ ಹೊಗೆಯಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತದೆ ಮತ್ತು ಶ್ವಾಸಕೋಶದ ಗಾತ್ರವನ್ನು ಕುಗ್ಗಿಸುತ್ತದೆ ಎಂದು ಸಂಶೋಧನೆ ವರದಿಯೊಂದು ದೃಢಪಡಿಸಿದೆ.

ವಾಹನಗಳು ಹೊರಬಿಡುವ ಹೊಗೆಯ ಮಾಲಿನ್ಯಕ್ಕೆ ಮಕ್ಕಳು ಮನೆಯಲ್ಲಿ ಅಥವಾ ಶಾಲೆಯಲ್ಲಿ ಅತೀ ಸಮೀಪದಲ್ಲಿದ್ದರೆ ಆಸ್ತಮಾ ಪೀಡಿತ ಮಕ್ಕಳ ಉಸಿರಾಟದ ಮೇಲೆ ತೀವ್ರ ತೊಂದರೆಗಳು ಉದ್ಭವಿಸುವುದು ನಮ್ಮ ಫಲಿತಾಂಶದಿಂದ ಸಾಬೀತಾಗಿದೆ ಎಂದು ಎಮೊರಿ ವಿವಿ ವೈದ್ಯ ಶಾಲೆಯ ಅಧ್ಯಯನದ ಮುಖ್ಯ ಲೇಖಕ ಫರ್ನಾಂಡೊ ಹಾಲ್ಗಿನ್ ತಿಳಿಸಿದರು.

ವಾಹನ ಸಂಬಂಧಿತ ಮಾಲಿನ್ಯಗಳು ಆಸ್ತಮಾ ತೀವ್ರತೆಯೊಂದಿಗೆ ನಂಟು ಹೊಂದಿರುವುದು ಇದರಿಂದ ತಿಳಿದುಬಂದಿದೆ. ಆದರೆ ಆಸ್ತಮಾಪೀಡಿತ ಮಕ್ಕಳು ಮತ್ತು ಆಸ್ತಮಾರಹಿತ ಮಕ್ಕಳ ಉಸಿರಾಟ ಮತ್ತು ಶ್ವಾಸಕೋಶದ ಗಾತ್ರದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆನ್ನುವುದು ಇನ್ನೂ ರುಜುವಾತಾಗಿಲ್ಲ.

ನಿರ್ದಿಷ್ಟ ವಾಹನ ಸಂಬಂಧಿತ ಮಾಲಿನ್ಯವು ಮಕ್ಕಳ ಶ್ವಾಸಕೋಶ ನಿರ್ವಹಣೆ ಮತ್ತು ಉಸಿರಾಟದ ಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ತನಿಖೆ ಮಾಡಲು ಸಂಶೋಧಕರು ವಯಸ್ಸು ಮತ್ತು ಲಿಂಗದಲ್ಲಿ ಹೊಂದಿಕೆಯಾಗುವ 6ರಿಂದ 12ರ ವಯೋಮಿತಿಯ 200 ಮಂದಿ ಮಕ್ಕಳನ್ನು ಆಯ್ಕೆಮಾಡಿಕೊಂಡರು. ಒಂದು ವರ್ಷದ ಅವಧಿಯಲ್ಲಿ ಮಕ್ಕಳ ಮನೆಗಳು ಮತ್ತು ಶಾಲೆಗಳಲ್ಲಿ ವಾಹನ ಸಂಬಂಧಿತ ಮಾಲಿನ್ಯಗಳ ಪ್ರಮಾಣ ಮತ್ತು ರಸ್ತೆ ಮತ್ತು ವಾಹನ ದಟ್ಟಣೆಯ ಪ್ರಮಾಣವನ್ನು ಅಳತೆ ಮಾಡಿ ಪ್ರತಿಯೊಂದು ಮಗುವಿನ ಶ್ವಾಸಕೋಶದ ನಿರ್ವಹಣೆ ಮತ್ತು ಉಸಿರಾಟದ ಲಕ್ಷಣಗಳನ್ನು ಕ್ರಮವಾಗಿ ನಾಲ್ಕು ತಿಂಗಳ ಕಾಲ ಮೌಲ್ಯಮಾಪನ ಮಾಡಿದರು.

ಅತ್ಯಂತ ವಾಹನದಟ್ಟಣೆಯ ಪ್ರದೇಶದ ಮನೆಗಳಲ್ಲಿ ವಾಸಿಸುವ ಆಸ್ತಮಾಪೀಡಿತ ಮಕ್ಕಳ ಮೇಲೆ ವಾಯುಮಾಲಿನ್ಯದ ಪರಿಣಾಮ ಉಂಟಾಗಿದ್ದು ಗೋಚರವಾಯಿತು. ಈ ಮಕ್ಕಳಲ್ಲಿ ಅಧಿಕ ಮಟ್ಟದಲ್ಲಿ ನೈಟ್ರಿಕ್ ಆಕ್ಸೈಡ್ ಸೇವನೆ ಹಾಗೂ ಶ್ವಾಸಕೋಶದ ಗಾತ್ರ ಕುಗ್ಗಿದ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮನಸ್ಸು, ದೇಹಕ್ಕೆ ವಿಶ್ರಾಂತಿ ನೀಡುವ ನಿದ್ರೆ
ಆಹಾರದಲ್ಲಿ ಬ್ಯಾಕ್ಟಿರಿಯಾ ಬಳಸಿ, ಆರೋಗ್ಯವಂತರಾಗಿರಿ!
ಎನ್ಎಸ್ಎಚ್‌ಪಿ ಅಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್
ಜೆಇ ವ್ಯಾಧಿ: 515ಕ್ಕೆ ಏರಿದ ಸಾವಿನ ಸಂಖ್ಯೆ
ಮಗುವಿನ ಕೆಮ್ಮಿಗೆ ರಾಮಬಾಣ ಜೇನುತುಪ್ಪ
ಅತಿಯಾದ ಕಾಫಿ ಸೇವನೆ ನಿದ್ರೆಗೆ ಮಾರಕ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಕವನ - ಕಾದು ಕುಳಿತಿರುವೆ ಕವಿತೆಗಾಗಿ ಮುಂಜಾನೆಯ ಇಬ್ಬನಿಯಲಿ ಮೈನೆನೆವ ಹಸಿರು ಹುಲ್ಲುಗಳ ನೋಡಿ... ಕವಿತೆ ಬರೆಯ ಬೇಕೆಂದೆನಿಸಿತು
ಮುಂದೆ ಓದಿ|ಮತ್ತಷ್ಟು...
Marketplace