|
| ಲಿವರ್ ಕ್ಯಾನ್ಸರ್ ತಗ್ಗಿಸುವ ಕಾಫಿ |
| ಲಂಡನ್ (ಏಜೆನ್ಸಿ), ಮಂಗಳವಾರ, 3 ಏಪ್ರಿಲ್ 2007 | |
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ ಸೇವನೆಯು ಪಿತ್ತಕೋಶದ ಕ್ಯಾನ್ಸರ್ ಸಾಧ್ಯತೆಯನ್ನ ತಡೆಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ನೇಪಲ್ಸ್ನ ಇಸ್ಟಿಟ್ಯೂಟೊ ಟ್ಯೂಮೊರಿಯ ಸಂಶೋಧಕರು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ.
ಪಿತ್ತಕೋಶದ ಸೋಂಕಿನಿಂದುಂಟಾಗುವ ಹೆಪಟೊಸೆಲ್ಯುಲರ್ ಕಾರ್ಸಿನೊಮ ಎಂಬ ಪಿತ್ತಕೋಶದ ಕಾನ್ಸರ್ ಅಭಿವೃದ್ಧಿಶೀಲ ಜಗತ್ತಿನಲ್ಲಿ ಮಾಮೂಲಿಯಾಗುತ್ತಿದೆ ಎಂದು ಹೇಳಿರುವ ಅಧ್ಯಯನ ಈ ಅಪಾಯವನ್ನು ತಪ್ಪಿಸುವಲ್ಲಿ ಕಾಫಿ ಸೇವನೆ ಸಹಕರಿಸುತ್ತದೆ ಎಂದು ಹೇಳಿದೆ.
ಇಟಲಿಯಲ್ಲಿ ಕಾಫಿ ಸೇವನೆ ಅಧಿಕ. ಸಂಶೋಧಕರು ತಮ್ಮ ಕಾಫಿ-ಕಾನ್ಸರ್ ಸಂಬಂಧದ ಅಧ್ಯಯನಕ್ಕಾಗಿ ಕ್ಯಾನ್ಸರ್ ಪೀಡಿತ 185 ಮಂದಿ ಹಾಗೂ ರೋಗ ನಿಯಂತ್ರಿತ 412 ಮಂದಿಯನ್ನು ಆಯ್ದುಕೊಂಡಿದ್ದರು.
ವಾರದಲ್ಲಿ ಕನಿಷ್ಠ ಪಕ್ಷ 28 ಕಪ್ ಕಾಫಿ ಕುಡಿಯುವವರಲ್ಲಿ, ವಾರಕ್ಕೆ 14 ಕಪ್ಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂದ ಕ್ಯಾನ್ಸ್ರ್ ಅಪಾಯ ಕಡಿಮೆ ಇದೆ. ಆದರೆ ವಾರಕ್ಕೆ 14ಕಪ್ಗಿಂತಲೂ ಕಡಿಮೆ ಕಾಫಿ ಕುಡಿಯುವವರಿಗಿಂತ ಕಾಫಿ ಕುಡಿಯದೇ ಇರುವವರಲ್ಲಿ ಕ್ಯಾನ್ಸರ್ ಅಪಾಯ ದುಪ್ಪಟ್ಟು ಹೆಚ್ಚಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಹೆಪಟೈಟಿಸ್ ಹಾಗೂ ಮದ್ಯಪಾನಕ್ಕೆ ನೇರ ಸಂಬಂಧವಿದೆ. ಆದರೆ ಚಹಾ ಅಥವಾ ಕೆಫೆನ್ ರಹಿತ ಕಾಫಿ ಹಾಗೂ ಕ್ಯಾನ್ಸರ್ ತಡೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಆದರೆ ಕಾಫಿಯಲ್ಲಿರುವ ಇತರ ಹಲವಾರು ಅಂಶಗಳು ಮದ್ಯಪಾನ ಅಥವಾ ಅಮಲು ಪದಾರ್ಥಗಳಿಂದಾಗಿ ಲಿವರ್ಗೆ ಉಂಟುಮಾಡುವ ಹಾನಿಯನ್ನು ತಡೆಯಬಹುದೆಂದು ಹೇಳಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|