|
| ಜಾಜಿ ಮಲ್ಲಿಗೆ ಸುವಾಸನೆ ಪ್ರೇಕ್ಷಕರಿಗೆ ಸಿಗುವುದೇ? |
| ಗುರುವಾರ, 2 ಏಪ್ರಿಲ್ 2009 ( 15:34 IST ) | |
ಸಿನಿಮಾ ಮುನ್ನೋಟ ಚಿತ್ರ: ಜಾಜಿಮಲ್ಲಿಗೆ ನಿರ್ದೇಶನ: ಆರ್.ಅನಂತರಾಜು ತಾರಾಗಣ: ಅಜಯ್, ಗೌರಿ ಮುಂಜಾಲ್, ಕೋಮಲ್
ತಾಜ್ ಮಹಲ್ ಚಿತ್ರದ ನಂತರ ಅಜಯ್ ಅಭಿನಯದ 'ಜಾಜಿಮಲ್ಲಿಗೆ' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರವನ್ನು ಅಣಜಿ ನಾಗರಾಜ್ ಹಾಗೂ ವಿತರಕ ಜಯಣ್ಣ ಸೇರಿ ನಿರ್ಮಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ದೇವತೈ ಕಂಡೇನ್ನ' ಚಿತ್ರದ ರೀಮೇಕ್ ಜಾಜಿಮಲ್ಲಿಗೆ.
ಇಲ್ಲಿ ಟೀ ಮಾರುವ ಮುಗ್ಧ ಹುಡುಗನನ್ನು ಪ್ರೀತಿಯ ಬಲೆಗೆ ಬೀಳಿಸಿ ನಂತರ ಕಾಲೇಜು ಹುಡುಗಿಯೊಬ್ಬಳು ಕೈ ಕೊಡುತ್ತಾಳೆ. ಇದನ್ನು ಪ್ರಶ್ನಿಸಿ ಹುಡುಗ ನ್ಯಾಯಾಲಯದ ಮೊರೆ ಹೋಗುವ ಕಥೆಯನ್ನು ಚಿತ್ರ ಒಳಗೊಂಡಿದೆ.
ಚಿತ್ರದಲ್ಲಿ ವಕೀಲೆಯಾಗಿ ಜಯಮಾಲಾ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಟ ಅಜಯ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಯಕಿಯಾಗಿ ಗೌರಿ ಮುಂಜಾಲ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಕೋಮಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಉಳಿದಂತೆ ಹಾಸ್ಯನಟರಾದ ಬುಲೆಟ್ ಪ್ರಕಾಶ್, ನಾಗಶೇಖರ್ ಹಾಗೂ ಮುನಿ ನಟಿಸಿದ್ದಾರೆ.
ಸುರಿವ ಮಳೆ, ಹರಿವ ಹೊಳೆ ಸಿಗದು ನೋಡು ಯಾರ ಕೈಗೂ ಎಂಬ ಟ್ಯಾಗ್ನ್ನು ಚಿತ್ರ ಒಳಗೊಂಡಿದೆ. ಚಿತ್ರಕ್ಕೆ ಸಾಧುಕೋಕಿಲ ಸಂಗೀತವಿದ್ದು, ಪಳನಿರಾಜ್ ಸಾಹಸ ಸಂಯೋಜಿಸಿದ್ದಾರೆ. ತಾಜ್ ಮಹಲ್ಲಿನಲ್ಲಿ ಅಜಯ್ನನ್ನು ಹರಸಿದ ಪ್ರೇಕ್ಷಕರು ಜಾಜಿಮಲ್ಲಿಗೆಯ ಸುವಾಸನೆ ಪಡೆಯುತ್ತಾರೋ ಕಾದು ನೋಡಬೇಕು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|