ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಚಿತ್ರಾನ್ನ ಬೆಡಗಿಗೆ ಒಲಿದ ಅದೃಷ್ಟ
ಶನಿವಾರ, 20 ಡಿಸೆಂಬರ್ 2008   ( 18:35 IST )
ಬುದ್ದಿವಂತ ಚಿತ್ರ ನೋಡದೆ ಇದ್ದರೂ ಚಿತ್ರಾನ್ನ ಹಾಡು ಮಾತ್ರ ಯಾರೂ ಮರೆಯಲ್ಲ. ಅಷ್ಟೇ ಅಲ್ಲ, ಏಕಾಏಕಿ ಚಿತ್ರಾನ್ನ ಹುಡುಗಿ ಸುಮನ್ ರಂಗನಾಥ್ ಪ್ರಚಾರ ಗಿಟ್ಟಿಸಿಕೊಂಡರು. ಸದ್ಯ ಗಾಂಧಿನಗರದ ನಿರ್ಮಾಪಕರು ಅವರವರ ಚಿತ್ರಗಳಿಗೆ ನಾಯಕಿಯರನ್ನು ಹುಡುಕಿದರೋ ಗೊತ್ತಿಲ್ಲ ಆದರೆ ಅದಕ್ಕೂ ಮೊದಲು ಸುಮನ್‌ಗೊಂದು ಪಾತ್ರ ಫಿಕ್ಸ್ ಮಾಡುತ್ತಿದ್ದಾರೆ.

ಹೀಗೆ ಇದೀಗ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಸುಮನ್ ಅವರ ಕಾಲ್ ಶೀಟ್‌ನತ್ತಲೇ ಎಲ್ಲರ ಗಮನ. ಬುದ್ದಿವಂತ ಸಿನಿಮಾ ಈ ರೀತಿ ಹೆಸರು ತಂದುಕೊಡಬಹುದೆಂದು ಸ್ವತಃ ಅವರೇ ಎಣಿಸಿರಲಿಲ್ಲವಂತೆ. ಈಗ ಕಲಾಕಾರ್ ಚಿತ್ರತಂಡದಲ್ಲಿ ಸುಮನ್ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಾಧಿಕಾ ಗಾಂಧಿ ಇದ್ದರೂ ಸುಮನ್ ಆ ಚಿತ್ರದಲ್ಲಿ ಸಿನಿಮಾ ತಾರೆಯ ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಹಿರಿಯ ಕಲಾವಿದ ಕೃಷ್ಣೇಗೌಡ ನಿರ್ಮಾಣದ ಅಂಜದಿರು ಚಿತ್ರಕ್ಕೆ ಸುಮನ್ ಆಯ್ಕೆಯಾಗಿದ್ದಾರೆ. ಉಷಾಕಿರಣ್ ಮೂವೀಸ್ ಅವರ ಸವಾರಿ ಚಿತ್ರದ ತಾರಾಬಳಗದಲ್ಲಿಯೂ ಸುಮನ್ ಹೆಸರಿದೆ.

ಒಟ್ಟಿನಲ್ಲಿ ಸುಮನ್ ಅದೃಷ್ಟ ಚೆನ್ನಾಗಿದೆ. ಚಿತ್ರಾನ್ನ ಬೆಡಗಿಯ ಮುಂದಿನ ಚಿತ್ರರಂಗದ ಬದುಕು ಹೇಗಾಗುತ್ತೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಹಿ ನೀಡಿದ ಚಂದ್ರುರವರಿಂದ ಈಗ ಕಹಿ
ನೀತು ಈಗ ಕರಾವಳಿ ಹುಡುಗಿ
ಕಿರುತೆರೆಯಿಂದ ಹಿರಿತೆರೆಗೆ
ಪ್ರೇಮ 'ಜೋಕಾಲಿ'
ನೋಡಿ ಮಸ್ತ್ ಮಜಾ ಮಾಡಬಹುದು
ತಂಗಿಗಾಗಿ ತ್ಯಾಗ ಮಾಡುವ ಅಕ್ಕ-ತಂಗಿ ಚಿತ್ರ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದುಬಾರಿ ನೈಸ್ ಫೀಸು: ಗೌಡರ ವಾಗ್ದಾಳಿ
ನೈಸ್ ರಸ್ತೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಹೀಗಾಗಿ ಏನೂ ಹೇಳಲು ಆಗುವುದಿಲ್ಲ. ಆದರೆ ಒಂದಂತೂ ಹೇಳಬಲ್ಲೆ ಈ ದುಬಾರಿ ಶುಲ್ಕಕ್ಕೆ ....
ಉಪಕುಲಪತಿ ನೇಮಕ ಅಕ್ರಮ: ರಾಜ್ಯಪಾಲರಿಗೆ ದೂರು
ಕನ್ನಡ ಅಂಕಿ ಫಲಕ: ಜ.1 ಗಡುವು
ಮನರಂಜನೆ
ಚಿತ್ರ ಸುದ್ದಿ - ಒಂದು ಸಮಯದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಗಾಂಧಿನಗರದಲ್ಲಿ ಬೇಡಿಕೆಯ ನಟನಾಗಿದ್ದ ಚರಣ್‌ರಾಜ್ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರವಾದರು. ಕನ್ನಡದಲ್ಲಿ ಅವರು ನಟಿಸಿದ
ಮುಂದೆ ಓದಿ|ಮತ್ತಷ್ಟು...