ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಸಮಾಗಮದಲ್ಲಿ ನ್ಯೂಟನ್ ಥಿಯರಿ
ಗುರುವಾರ, 27 ನವೆಂಬರ್ 2008   ( 16:20 IST )
ಸಮಾಗಮ ನ್ಯೂಟನ್ ಥಿಯರಿ ಇದ್ದ ಹಾಗೆ. ಪ್ರೀತಿ, ಪ್ರೇಮ ಗುರುತ್ವಾಕರ್ಷಣೆ ಸಿದ್ದಾಂತದ ಮೇಲೆ ನಮ್ಮ ಸಮಾಗಮ ನಿಂತಿದೆ. ಸ್ನೇಹ-ಪ್ರೀತಿ ಇವೆರಡರ ನಡುವಿನ ವ್ಯತ್ಯಾಸವೇನು, ಒಂದು ವಸ್ತುವಿನ ಚಲನೆ ನಿಂತಾಗ ಅದು ತನ್ನ ಶಕ್ತಿಯನ್ನು ಯಾಕೆ ಕಳೆದುಕೊಳ್ಳುತ್ತದೆ. ಅದೇ ರೀತಿ ಎರಡು ಜೀವಗಳು ಹೆಚ್ಚೆಚ್ಚು ಸನಿಹ ಬಂದಾಗ ಸ್ನೇಹ, ಪ್ರೀತಿ ಕಡೆ ತಿರುಗುತ್ತದೆ ಎನ್ನುತ್ತಾ ತಲೆಗೆ ಹುಳ ಬಿಟ್ಟರು 'ಸಮಾಗಮ' ಚಿತ್ರದ ನಿರ್ಮಾಪಕ ಮತ್ತು ಕತೆಗಾರ ಅಂದಾನಿಗೌಡ ಹಾಲಹಳ್ಳಿ.

ವಿಶ್ರಾಂತ್ ಈ ಚಿತ್ರದ ನಾಯಕ. ಹುಟ್ಟೂರು ಮಾಲೂರು. ಅಭಿನಯ ಕಲಿತದ್ದು ಗುರು ದೇಶಪಾಂಡೆ ಅವರ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆಯಲ್ಲಿ. ಓದಿದ್ದು ಡಿಪ್ಲೊಮಾ. ಕಾಲೇಜು ಹುಡುಗನ ಪಾತ್ರವನ್ನು ಚಿತ್ರದಲ್ಲಿ ಮಾಡುತ್ತಿದ್ದಾರೆ. ಮೂಲತಃ ಕೇರಳದವರಾದ ವಿದ್ಯಾ ಚಿತ್ರದ ನಾಯಕಿ. ಆದರೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ತಮಿಳು ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಕಸ್ತೂರಿ ಜಗನ್ನಾಥ್ ಹೊತ್ತುಕೊಂಡಿದ್ದಾರೆ. ಇವರು ಮಹೇಶ್ ಸುಖಧರೆ ಅವರ ಶಿಷ್ಯ. ಸಿನಿಮಾ ರಂಗಕ್ಕೆ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಸಮಾಗಮ ಬಗ್ಗೆ ಕೇಳಿದರೆ ಇದೊಂದು ಸ್ನೇಹ ಪ್ರೀತಿ ಕತೆ ಅಷ್ಟೇ ಎನ್ನುತ್ತಾರೆ. ನಿರ್ಮಾಪಕ ಗೌಡರು ಸೋಮವಾರ ಪೇಟೆಯ ಕೃಷಿಕರು. ಕಥೆ,ಲೇಖನ ಬರೆಯುವುದು ಇವರ ಹವ್ಯಾಸ.

ಅನುರೂಪ ಸಂಬಂಧಗಳ ಅನಾವರಣ ಎಂಬ ಅಡಿಬರಹವನ್ನು ನೀಡಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರು ಸಾಹಿತ್ಯ ಬರೆದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಹರ್ಷಿಯ ಕಥೆ-ವ್ಯಥೆ
ಮನ ಮುಟ್ಟುವ ಸ್ಲಂ ಬಾಲ
ಕುತೂಹಲ ಕೆರಳಿಸದ ಸೈಕೋ
ಡೈಲಾಗ್‌ನಲ್ಲೇ ಮುಳುಗಿ ಹೋಗುವ ಸಂಗಮ
ಬಾ ಬೇಗ ಚಂದಮಾಮದ ಅಧೋಗತಿ
ಹಳೇ ಸೀಸೆಯಲ್ಲಿ ಹೊಸ ವೈನ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...