ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಮಹರ್ಷಿಯ ಕಥೆ-ವ್ಯಥೆ
ಸೋಮವಾರ, 17 ನವೆಂಬರ್ 2008   ( 16:48 IST )
ಚಿತ್ರ ವಿಮರ್ಶೆ
ಚಿತ್ರ: ಮಹರ್ಷಿ
ನಿರ್ದೇಶನ: ಕೃಷ್ಣಬ್ರಹ್ಮ
ತಾರಾಗಣ: ಪ್ರಶಾಂತ್, ಪೂಜಾಗಾಂಧಿ

ಆತ ಕಾಲೇಜು ಹುಡುಗ. ತನ್ನ ಪಾಡಿಗೆ ತಾನಿರುವಾಗ ರೌಡಿಗಳು ಆತನ ತಂಟೆಗೆ ಬರುತ್ತಾರೆ. ಮಗನ ಪರವಾಗಿ ಬಂದ ತಾಯಿಯ ಮೇಲೂ ಕೈ ಮಾಡಲು ಮುಂದಾಗುತ್ತಾರೆ. ಇದರಿಂದ ಸಿಟ್ಟಾದ ಮಗ ರೌಡಿಗಳಿಗೆ ಹಿಗ್ಗಾಮುಗ್ಗಾ ಥಳಿಸುತ್ತಾನೆ. ಕ್ರಮೇಣ ಆತ ಕೂಡಾ ರೌಡಿಯಾಗುತ್ತಾನೆ- ಇಂತಹ ಕಥೆಗಳನ್ನು ತುಂಬಾ ಕೇಳಿದ್ದೀವಿ. ಮತ್ತೆ ಇದ್ಯಾವುದರ ಕಥೆ ಬಿಡುತ್ತಿದ್ದಾರೆ ಎಂದು ನಿಮಗೆ ಆಶ್ವರ್ಯವಾಗಬಹುದು. ಆದರೆ ಇದು ಈ ವಾರ ತೆರೆ ಕಂಡ ಮಹರ್ಷಿ ಚಿತ್ರದ ಅಪರೂಪದ ಕಥೆ.

ನಿರ್ದೇಶಕ ಕೃಷ್ಣಬ್ರಹ್ಮ ಯಾರಿಗೂ ಸಿಗದಂತಹ ಕಥೆ ತಮಗೆ ಸಿಕ್ಕಿದೆ ಎಂಬಂತೆ ಬಿಲ್ಡಪ್ ತಗೊಂಡು ಒಂದು ಸಾಮಾನ್ಯ ಚಿತ್ರ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಇಂತಹ ಸಿನಿಮಾಗಳು ಎಷ್ಟು ಬಂದಿಲ್ಲ ನೀವೇ ಹೇಳಿ. ಮತ್ತೇ ಅಂತಹುದೇ ಕಥೆ ಇರುವ ಚಿತ್ರವೊಂದು ಅದು ಕೂಡಾ ಹೊಸತನವಿಲ್ಲದೆ ನಿರ್ದೇಶಿಸಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿಲು ಪ್ರಯತ್ನಿಸಿದ್ದಾರೆ.

ಗಾಂಧಿನಗರದ ಸಿದ್ಧಸೂತ್ರಗಳಿಗೆ ಜೋತು ಬಿದ್ದು, ಫೈಟ್, ಸೆಂಟಿಮೆಂಟ್, ಡ್ಯಾನ್ಸ್ ಹಾಗೂ ಐಟಂ ಸಾಂಗುಗಳನ್ನು ನಿರ್ದೇಶಕರು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಇಲ್ಲಿ ನಿರ್ದೇಶಕರು ಕಾಲೇಜು ಹುಡುಗ ಎಂದು ತೋರಿಸಲು ಪ್ರಶಾಂತ್ ತಲೆಗೆ ಬಣ್ಣ ಹಚ್ಚಿದ್ದಾರೆ. ಒರಟ ಐ ಲವ್ ಯ‌ೂ ಚಿತ್ರದ ಮೂಲಕ ಭರವಸೆ ಮೂಡಿಸಿದ ಪ್ರಶಾಂತ್ ಇಲ್ಲಿ ನಿರ್ದೇಶಕರ ಕೈಗೊಂಬೆಯಾಗಿ ಏನೇನೋ ಅವತಾರ ತಾಳಿದ್ದಾರೆ.

ಲೋ ಬಜೆಟ್ ಚಿತ್ರವೆಂಬುದನ್ನು ಸಾಬೀತುಪಡಿಸಲು ಪೂಜಾಗಾಂಧಿಗೆ ವಿಚಿತ್ರ ಕಾಸ್ಟ್ಯೂಮ್ಸ್ ಬಳಸಿದ್ದಾರೆ. ಪೂಜಾ ಏನೋ ಚೇಂಜ್ ಬಯಸಿರಬೇಕು. ಅದಕ್ಕಾಗಿ ಇಂತಹ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಜಾಸ್ತಿ ಮಾತನಾಡುವಾಗಿಲ್ಲ. ಅನೇಕ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಮೊದಲೇ ಕತ್ತರಿ ಹಾಕಿದ್ದರಿಂದ ಪ್ರೇಕ್ಷಕರು ಸ್ವಲ್ಪ ಬಚಾವ್.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮನ ಮುಟ್ಟುವ ಸ್ಲಂ ಬಾಲ
ಕುತೂಹಲ ಕೆರಳಿಸದ ಸೈಕೋ
ಡೈಲಾಗ್‌ನಲ್ಲೇ ಮುಳುಗಿ ಹೋಗುವ ಸಂಗಮ
ಬಾ ಬೇಗ ಚಂದಮಾಮದ ಅಧೋಗತಿ
ಹಳೇ ಸೀಸೆಯಲ್ಲಿ ಹೊಸ ವೈನ್
ಆರಾಮವಾಗಿ ನೋಡಬಹುದು ಧಿಮಾಕು
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತಪ್ಪಾಗಿ ಅರ್ಥೈಸಲಾಗಿದೆ: ಪೇಜಾವರ ಶ್ರೀ
ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರಗೊಳ್ಳುವ ಕುರಿತಾಗಿ ತಮ್ಮ ...
ಪ್ರಿಯತಮೆಗಾಗಿ ಪತ್ನಿಯನ್ನು ಕೊಂದ ಟೆಕಿ
ಬಿಜೆಪಿಯತ್ತ ವೆಂಕಟಾಚಲಯ್ಯ ಚಿತ್ತ
ಮನರಂಜನೆ
ಹೊಸ ಚಿತ್ರ - ಮುಂಗಾರು ಮಳೆ ಚಿತ್ರ ಹಿಟ್ ಆದ ನಂತರ ಮಳೆ ಹೆಸರಿನ ಸಾಕಷ್ಟು ಚಿತ್ರಗಳು ತೆರೆಗೆ ಬಂದಷ್ಟೆ ವೇಗದಲ್ಲಿ ಮರೆಯಾಗಿದೆ. ಇದೀಗೆ ಅಮಿತ್ ನಿರ್ದೇಶನದ ‘ಮುಂಗಾರಿನ ಮೊದಲ ಹನಿ’ ಸಿನಿಮಾ ಸೆಟ್ಟೇರುತ್ತಿದೆ.
ಮುಂದೆ ಓದಿ|ಮತ್ತಷ್ಟು...