ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಹಳೇ ಸೀಸೆಯಲ್ಲಿ ಹೊಸ ವೈನ್
ಬೆಂಗಳೂರು, ಸೋಮವಾರ, 6 ಅಕ್ಟೋಬರ್ 2008   ( 15:50 IST )
ಚಿತ್ರ: ವಂಶಿ
ನಿರ್ದೇಶನ: ಪ್ರಕಾಶ್
ತಾರಾಗಣ: ಪುನೀತ್, ಲಕ್ಷ್ಮೀ, ನಿಖಿತಾ

ಈ ಹಿಂದೆ ತೆರೆಯ ಮೇಲೆ ಅನೇಕ ಸಲ ಬಂದ ಕಥೆಯನ್ನೇ ಪ್ರಕಾಶ್ ತಮ್ಮ ವಂಶಿಯಲ್ಲಿ ಆರಿಸಿಕೊಳ್ಳುವ ಮೂಲಕ ಎಡವಿದ್ದಾರೆ. ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿದೆ. ಇಲ್ಲಿ ತಾಯಿ ಮಗನ ಸೆಂಟಿಮೆಂಟನ್ನು ವಿಭಿನ್ನವಾಗಿ ತೋರಿಸಲಾಗಿದೆ ಎಂದಿದ್ದರು. ಆದರೆ ಚಿತ್ರ ನೋಡಿದಾಗ ಇತರ ಚಿತ್ರಗಳಿಗಿಂತ ಹೆಚ್ಚಿನ ವ್ಯತ್ಯಾಸವೇನು ಇಲ್ಲಿ ಕಾಣಸಿಗುವುದಿಲ್ಲ.

ತಂದೆಯಂತೆ ಮಗ ರೌಡಿಯಾಗಬಾರದೆಂದು ಕಣ್ಣಿನಲ್ಲಿ ಕಣ್ಣಿಟ್ಟು ಮಗನನ್ನು ನೋಡಿಕೊಳ್ಳುವ ತಾಯಿ, ತಾಯಿಯ ಇಚ್ಚೆಯಂತೆ ಓದಿ ಗ್ರ್ಯಾಜ್ಯುವೆಟ್ ಮುಗಿಸಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿರುವ ಮಗ. ಇನ್ನೇನು ಎಸ್ಐ ಹುದ್ದೆ ಸಿಕ್ಕಿತ್ತೆನ್ನುವಷ್ಟರಲ್ಲಿ ರೌಡಿಯ ಮಗನೆಂದು ಕೆಲಸ ನಿರಾಕರಣೆ, ವಿಷಯ ತಿಳಿದ ಮಗನಿಂದ ಸಂಕಟ. ಮಗನಿಗೆ ತಾನು ಈ ವರೆಗೆ ಮುಚ್ಚಿಟ್ಟ ವಿಷಯ ಗೊತ್ತಾಯಿತ್ತಲ್ಲ ಎಂದು ಗೋಳಾಡುವ ತಾಯಿ.. ಹೀಗೆ ವಂಶಿ ಒಂದೊಂದೇ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

ಚಿತ್ರದಲ್ಲಿ ತಮಿಳಿನ ನಂದಾ ಚಿತ್ರದ ಛಾಯೆ ಸ್ವಲ್ಪ ಎದ್ದು ಕಾಣುತ್ತದೆ. ವಂಶಿಯಲ್ಲಿ ರೌಡಿಯ ಮಗ ಸಮಾಜದ ದೃಷ್ಟಿಯಲ್ಲಿ ಮರಿ ರೌಡಿಯಾಗಿಯೇ ಕಾಣುತ್ತಾನೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂದು ಮಗ ಬಯಸಿದರೂ ಅನಿವಾರ್ಯ ಕಾರಣಗಳಿಂದಾಗಿ ಆತ ನಾಲ್ಕಾರು ಹೆಣಗಳನ್ನು ಉರುಳಿಸಬೇಕಾಗುತ್ತದೆ. ವಂಶಿಯಲ್ಲಿ ರೌಡಿಯಾಗಲು ಹೊರಟ ಮಗನಿಗೆ ತಾಯಿ ವಿಷ ಹಾಕುತ್ತಾಳೆ. ಆದರೆ ಮಗ ಮಾತ್ರ ಬದುಕುತ್ತಾನೆ. ಆದರೆ ನಂದಾ ಚಿತ್ರದಲ್ಲಿ ತಾಯಿಯಿಂದ ವಿಷ ಉಂಡ ಮಗ ಸಾಯುತ್ತಾನೆ.

ಪ್ರಕಾಶ್ ಯಾಕೋ ಹಳೆಯ ಕಥೆಗೆ ಪಾಲಿಶ್ ಮಾಡಿದಂತಿದೆ. ಇಂತಹ ಅನೇಕ ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಕೂಡಾ ನಟಿಸಿದ್ದಾರೆ. ಸಿದ್ಧಸೂತ್ರಗಳಾದ ಕಾಮಿಡಿ, ಫೈಟಿಂಗ್ ಗಳಿಗೆ ಪ್ರಕಾಶ್ ಮೊರೆ ಹೋಗಿದ್ದಾರೆ. ಚಿತ್ರದಲ್ಲಿ ಪುನೀತ್ ಅವರನ್ನು ಪೂರ್ಣ ಪ್ರಮಾಣದ ಆಕ್ಷನ್ ಹೀರೋವನ್ನಾಗಿ ಮಾಡಿದ್ದಾರೆ. ಮಾಸ್ ಪ್ರಿಯರಿಗೆ ಭರ್ಜರಿ ಫೈಟಿಂಗ್ ದೃಶ್ಯಗಳಿವೆ. ಲಕ್ಷ್ಮಿ ಹಾಗೂ ಪುನೀತ್ ಅಭಿನಯದ ಬಗ್ಗೆ ಮಾತನಾಡುವಾಗಿಲ್ಲ. ತಾಯಿ-ಮಗನಾಗಿ ಅವರಿಬ್ಬರ ನಟನೆ ಅದ್ಭುತವಾಗಿ ಮೂಡಿಬಂದಿದೆ. ನಾಯಕಿ ನಿಖತಾ ಇನ್ನೂ ಪಳಗಬೇಕು. ಛಾಯಾಗ್ರಾಹಣ ಫೈಟಿಂಗ್ ದೃಶ್ಯಗಳಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಕೆಲವು ಹಾಡುಗಳನ್ನು ಕೇಳಬಹುದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರಾಮವಾಗಿ ನೋಡಬಹುದು ಧಿಮಾಕು
ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಮಾದೇಶ
ಲವಲವಿಕೆಯ ಕೋಡಗನ ಕೋಳಿ ನುಂಗಿತ್ತಾ
ಅರ್ಜುನಂದು ಸಾಹಸ ಏಕೋ ಓವರ್ ಆಯಿತು?!
ಅಯೋಮಯ ಬೊಂಬಾಟ್
ಚಿತ್ರ: ನಂದಾದೀಪ
ಗ್ರಹ ಗತಿ
ದೈನಿಕ - ಅದರಲ್ಲೂ ಸಂತೋಷ ಕಾಣುವವರಿರಬಹುದು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಾಜಿ ಸಿಎಂರಿಂದ ಮತ್ತೊಂದು ಸವಾಲು
ತಮ್ಮ ವಿರುದ್ಧದ 150 ಕೋಟಿ ರೂ. ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿದ್ದಲ್ಲಿ ಸರ್ಕಾರ ...
ರಾಜ್ಯದ ಕನಸಿಗೆ ತಣ್ಣೀರೆರಚಿದ ಕೇಂದ್ರಸರ್ಕಾರ
ಲೋಕಾಯುಕ್ತ ತನಿಖೆಗೆ ಒಳಪಡಿಸಿ: ಕುಮಾರಸ್ವಾಮಿ
ಮನರಂಜನೆ
ಚಿತ್ರ ಸುದ್ದಿ - ‘ಸಂಗಮ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಬೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಜಗಮಗಿಸಿ ಭವ್ಯವಾದ ಆಸನದೊಂದಿಗೆ ಕಂಗೊಳಿಸುತಿತ್ತು. ಜಂಕರ್ ಆಡಿಯೋ ಹೊರತಂದಿರುವ ಸಂಗಮ ಚಿತ್ರದ ಧ್ವನಿ ಸುರುಳಿಯನ್ನು ನಿರ್ಮಾಪಕಿ ಪಾರ್ವತಮ್ಮ
ಮುಂದೆ ಓದಿ|ಮತ್ತಷ್ಟು...