ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಆರಾಮವಾಗಿ ನೋಡಬಹುದು ಧಿಮಾಕು
ಬೆಂಗಳೂರು, ಸೋಮವಾರ, 15 ಸೆಪ್ಟೆಂಬರ್ 2008   ( 17:03 IST )
ನಿರ್ದೇಶನ: ಮಗೇಶ್ ಕುಮಾರ್
ತಾರಾಗಣ: ನವೀನ್ಕೃಷ್ಣ, ಪಾವನಿ, ಮಯೂರ್ ಸೈನಿ, ರಂಗಾಯಣ ರಘು, ಸುಧಾ ಬೆಳವಾಡಿ

ಅಲ್ಲಿ ಕಥೆ ಇಲ್ಲದಿರಬಹುದು. ಆದರೆ ಉತ್ತಮ ದೃಶ್ಯಗಳಿವೆ. ಪ್ರೇಕ್ಷಕರು ತಮ್ಮ ನಿಶ್ಚಿಂತೆ ಮರೆತು ಎರಡೂವರೆ ತಾಸು ಆರಾಮವಾಗಿ ಚಿತ್ರ ನೋಡಬಹುದು. 12 ವರ್ಷದಿಂದ ಚಿತ್ರರಂಗದಲ್ಲಿದ್ದ ನವೀನ್ ಕೃಷ್ಣ ಕೊನೆಗೂ 'ಧಿಮಾಕು' ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಧಿಮಾಕು ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲೂ ವಿಭಿನ್ನತೆ ಎದ್ದು ಕಾಣುತ್ತದೆ. ಪಕ್ಕಾ ಕಮರ್ಷಿಯಲ್ ಚಿತ್ರವಾದರೂ ಅದನ್ನು ನಿರೂಪಿಸಿದ ರೀತಿ ಮಾತ್ರ ವಿಶೇಷವಾಗಿದೆ. ಮಗೇಶ್ ಕುಮಾರ್ ತಮ್ಮ ಮೊದಲ ನಿರ್ದೇಶನದಲ್ಲೇ ಶತಕ ಬಾರಿಸಿದಂತಿದೆ. ಶ್ರೀಮಂತ ಕುಟುಂಬದ ಹುಡುಗಿಯನ್ನು ನಾಯಕ ಪಟಾಯಿಸುವ ಹಾಗೂ ಆ ಸಂದರ್ಭಧಲ್ಲಿ ಆತ ಎದುರಿಸುವ ಎಡರು-ತೊಡರುಗಳು ಚಿತ್ರದ ಕಥೆ. ನಾಯಕನಿಗೆ ಆತನಲ್ಲಿರುವ ಧಿಮಾಕು ಒಂದೇ ಬಂಡವಾಳ. ಇಂತಹ ಚಿತ್ರಕಥೆಗಳು ಕನ್ನಡದಲ್ಲಿ ಬೇಜಾನ್ ಬಂದಿವೆ. ಆದರೆ ಇಲ್ಲಿ ನವೀನ್ ಕೃಷ್ಣ ತಮ್ಮ ವಿಶಿಷ್ಟ ಎನ್ನುವಂತಹ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.

ಚಿತ್ರದಲ್ಲಿ ಬಳಸಿದ ಕಾಸ್ಟ್ಯೂಮ್ ಕೂಡಾ ಡಿಫರೆಂಟ್ ಆಗಿದೆ. ನಾಯಕ ನನವೀನ್ ಕೃಷ್ಣ ಎಲ್ಲೂ ಎಡವಿಲ್ಲ. ದುರ್ಯೋಧನನಾಗಿ ಪಟಪಟನೆ ಹೇಳುವ ಡೈಲಾಗುಗಳು ಮೆಚ್ಚುಗೆಯಾಗುತ್ತದೆ.

ಚಿತ್ರಕ್ಕೆ ಬೇಕಾದ ಎಲ್ಲ ಮಸಾಲೆಗಳನ್ನು ನೀಡಿದ್ದಾರೆ. ಚಿತ್ರದ ನಾಯಕಿ ಪಾವನಿಗಿಂತ ಆಕೆಯ ತಾಯಿ ಪಾತ್ರ ಮಾಡಿದ ಮಯೂರಿ ಸೈನಿ ಹೆಚ್ಚು ಗಮನ ಸೆಳೆಯುತ್ತಾರೆ. ಒಂದು ಹಂತದಲ್ಲಿ ಆಕೆಯೇ ನಾಯಕಿಯಾದರೆ ಬೆಟರ್ ಎನ್ನುವಂತಿದೆ. ಚಿತ್ರದಲ್ಲಿನ ಎರಡು ಹಾಡು ಕೇಳುವಂತಿದೆ.

ಧಿಮಾಕು ಚಿತ್ರದಲ್ಲಿ ಕಥೆಗಿಂತ ನವೀನ್ ಕೃಷ್ಣರ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಂಭಾಷಣೆಗಾರ ಶಂಕರ್ ಬಿಲ್ಲೆಮನೆ ಹಿತವೆನಿಸುವಂತಹ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರ ಸ್ಟೈಲನ್ನು ನವೀನ್ ಕೃಷ್ಣ ಅನುಕರಿಸಿದಂತಿದೆ. ಆದರೂ ಅದು ಎಲ್ಲೂ ಬೋರ್ ಹೊಡೆಸುವುದಿಲ್ಲ.

ಚಿತ್ರದಲ್ಲಿ ಜಗ್ಗೇಶ್, ಕೋಮಲ್ ಒಮ್ಮೆ ಬಂದು ಪಟಪಟ ಮಾತನಾಡಿ ರಂಜಿಸಿ ಹೋಗುತ್ತಾರೆ. ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಅವರ ನಟನೆ ಮನ ಮುಟ್ಟುತ್ತದೆ. ಒಟ್ಟಾಗಿ ಎರಡೂವರೆ ತಾಸು ಕುಳಿತು ಆರಾಮವಾಗಿ ಚಿತ್ರ ನೋಡಬಹುದು.


(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಮಾದೇಶ
ಲವಲವಿಕೆಯ ಕೋಡಗನ ಕೋಳಿ ನುಂಗಿತ್ತಾ
ಅರ್ಜುನಂದು ಸಾಹಸ ಏಕೋ ಓವರ್ ಆಯಿತು?!
ಅಯೋಮಯ ಬೊಂಬಾಟ್
ಚಿತ್ರ: ನಂದಾದೀಪ
ಪ್ರೀತಿಯ ಸುತ್ತ ಸುತ್ತುವ ತಾಜ್ಮಹಲ್
ಗ್ರಹ ಗತಿ
ದೈನಿಕ - ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು ಈಗ ಮಾಡಬೇಕಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕರಾವಳಿಯಲ್ಲಿ ಹೆಲಿಟೂರಿಸಂ : ಜನಾರ್ದನ ರೆಡ್ಡಿ
ಕರಾವಳಿ ಪ್ರವಾಸೀ ಕ್ಷೇತ್ರಗಳು ಮತ್ತು ಹಂಪಿಯನ್ನು ಒಳಗೊಂಡು ಪ್ರವಾಸಿಗರಿಗೆ ಹೆಲಿಕಾಪ್ಟರ್ ಸೇವೆ...
ಭಜರಂಗದಳ ನಿಯಂತ್ರಿಸಲಿ: ಕುಮಾರಸ್ವಾಮಿ ಗುಡುಗು
ಬಿಜೆಪಿ ಔತಣಕೂಟದಲ್ಲಿ ಸೋಮಣ್ಣ
ಮನರಂಜನೆ
ಚಿತ್ರ ಸುದ್ದಿ - ವಾಯ್ಸ್ ಆಫ್ ಕರ್ನಾಟಕ, ಐಡಿಯಾ ಸ್ಟಾರ್ ಸಿಂಗರ್ ಅನ್ನುವ ಸಂಗೀತ ಸ್ಪರ್ಧೆ ಮೂಲಕ ಅದೆಷ್ಟು ಗಾಯಕಿಯರು ಹೊರಹೊಮ್ಮಿಲ್ಲ. ಇದೀಗ ಕರ್ನಾಟಕದ ಈ ಪತಾಕೆಯನ್ನು ಹಾರಿಸಲು ರಿತೀಶಾ ಪದ್ಮನಾಭ್ ಬರುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...