ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಗಣೇಶ್‌ರ ಕಿಚಡಿ ಡೈಲಾಗು ಇಲ್ಲದೆ ಸೊರಗಿದ ಅರಮನೆ
ಬೆಂಗಳೂರು, ಸೋಮವಾರ, 28 ಏಪ್ರಿಲ್ 2008   ( 13:44 IST )
ಗಣೇಶ್ ಅಭಿನಯದ 'ಅರಮನೆ' ಚಿತ್ರ ಬಿಡುಗಡೆಯಾಗಿದೆ. ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಗಣೇಶ್‌ನ ಚಿತ್ರ ಅರಮನೆ. ಚಿತ್ರದ ಬಗ್ಗೆ ಸಹಜವಾಗಿಯೇ ಜನರಲ್ಲಿ ಕುತೂಹಲ ಮೂಡಿತ್ತು. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅರಮನೆ ಚಿತ್ರದಲ್ಲಿ ಗಣೇಶ್ ಅಭಿನಯ ಎಲ್ಲ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಬೇರೆ ಚಿತ್ರಗಳಲ್ಲಿ ಅದೇ ತನ್ನ ಮುಂಗಾರು ಮಳೆ ಧಾಟಿಯ ಒಂದಷ್ಟು ಹಾಸ್ಯಭರಿತ ಡೈಲಾಗುಗಳನ್ನು ಹೇಳಿ ಅಭಿಮಾನಿಗಳ ಮನಕ್ಕೆ ಲಗ್ಗೆ ಇಡುತ್ತಿದ್ದ ಗಣೇಶ್‌ನನ್ನು ವಿಭಿನ್ನವಾಗಿ ಅನಾವರಣಗೊಳಿಸುವ ಪ್ರಯತ್ನ ಅರಮನೆಯಲ್ಲಿ ನಡೆದಿದೆ.

ನಿರ್ದೇಶಕ ನಾಗಶೇಖರ್ ಮೊದಲ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕಥೆಯನ್ನು ತಮ್ಮದೇ ಆದ ಹೊಸ ಶೈಲಿಯಲ್ಲಿ ನಿರೂಪಿಸಿದ್ದಾರೆ.

ಛಾಯಾಗ್ರಾಹಕನಾದ ಅರುಣ್ (ಗಣೇಶ್) ದೊಡ್ಡ ಬಂಗಲೆಯಲ್ಲಿ ಏಕಾಂಗಿಯಾಗಿ ಕುಡಿಯುತ್ತಾ ಕುಳಿತಿರುವ ರಾಜಶೇಖರ್ (ಅನಂತ್ ನಾಗ್)ರನ್ನು ಭೇಟಿಯಾಗುತ್ತಾನೆ. ಪತ್ನಿ ತೀರಿದ ಎರಡೇ ತಿಂಗಳಲ್ಲಿ ಮತ್ತೊಂದು ಮದುವೆಗೆ ಮುಂದಾದ ತನ್ನ ದುರ್ಬುದ್ದಿಯನ್ನು ವಿರೋಧಿಸಿ ತನ್ನಿಂದ ದೂರವಾದ ಮಗ, ಮಗಳು ಹಾಗೂ ಅಳಿಯನನ್ನು ಮತ್ತೆ ತನ್ನೊಂದಿಗೆ ಒಂದುಗೂಡಿಸುವಂತೆ ರಾಜಶೇಖರ್ ಛಾಯಾಗ್ರಾಹಕ ಅರುಣ್‌ನ ಸಹಾಯ ಕೇಳುತ್ತಾರೆ. ತನ್ನ ಜಾಣ್ಮೆಯಿಂದ ಅರುಣ್ ಅವರನ್ನೆಲ್ಲ ಮತ್ತೆ ಆ ಭವ್ಯವಾದ 'ಅರಮನೆ'ಯಲ್ಲಿ ಒಂದುಗೂಡಿಸುತ್ತಾನೆ. ಅದು ಹೇಗೆಂದು ತೆರೆಯ ಮೇಲೆ ನೋಡಿ ಆನಂದಿಸಿ.

ಗಣೇಶ್ ಒಬ್ಬ ಜವಾಬ್ದಾರಿಯುತ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ವಿದೇಶಿ ದಂಪತಿಯ ಮಗು ತನ್ನ ಕ್ಯಾಮರಾಗೆ ಆಸೆ ಪಟ್ಟಾಗ ಅದನ್ನು ಆ ಮಗುವಿಗೆ ಕೊಡುವ ದೃಶ್ಯ ಚಿತ್ರದಲ್ಲಿ ಗಣೇಶ್‌ನ ಭಾವನಾತ್ಮಕ ಅಭಿನಯಕ್ಕೆ ಹಿಡಿದ ಕನ್ನಡಿ. ಇಲ್ಲಿ ಗಣೇಶ್ ತನ್ನ 'ಗಣೇಶಿಸಂ'ನಿಂದ ಹೊರ ಬಂದು ಸ್ವಲ್ವ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಗಣೇಶ್‌ನಿಂದ ಕ್ರೇಜಿ ಕಿಚಡಿ ಡೈಲಾಗುಗಳನ್ನು ಬಯಸಿದ ಅಭಿಮಾನಿಗಳಿಗೆ ಇಲ್ಲಿ ನಿರಾಶೆ ಉಂಟಾಗುತ್ತದೆ. ಪದೇ ಪದೇ ಬರುವ ಒಂದೇ ರೀತಿಯ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರಿಗೆ ಕಿರಿಕ್ ಉಂಟು ಮಾಡುತ್ತದೆ.

ಶ್ರೀಮಂತ ಕುಡುಕನ ಪಾತ್ರದಲ್ಲಿ ಅನಂತ್ ನಾಗ್ ಅಭಿನಯ ಅದ್ಬುತವಾಗಿದೆ. ನಾಯಕಿಯಾಗಿ ರೋಮಾಳ ನಟನೆ ಏನೂ ಸಾಲದು. ತೇಜಸ್ವಿನಿ ಬಂದು ಹೋಗುತ್ತಾಳೆ. ಗುರುಕಿರಣ್ ಸಂಗೀತ ಚಿತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೆಲವು ಟ್ಯೂನ್‌ಗಳನ್ನು ಕೇಳುತ್ತಿದ್ದಂತೆ ಹಿಂದಿನ ಯಾವುದೋ ಚಿತ್ರಗಳ ಟ್ಯೂನ್ನತ್ತ ಮನಸ್ಸು ಜಾರುತ್ತದೆ. ಸುಂದರ್ ರಾಜ್ ಸಂಕಲನ ಸಾಧಾರಣವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಶಾಭಾವನೆ ಮೂಡಿಸಿದ ಮೊಗ್ಗಿನ ಜಡೆ
ಮೊಗ್ಗಿನ ಜಡೆ
ಮಿಸ್ಟರ್ ಗರಗಸ
ಥ್ರಿಲ್ಲರ್ ಚಿತ್ರ ಆಕ್ಸಿಡೆಂಟ್
ಸತ್ಯ ಇನ್ ಲವ್ ಶಿವಣ್ಣ ಸಕ್ಸೆಸ್ಸ್
ಗೂಳಿಯಲ್ಲಿ ಮಿಂಚಿದ ಸುದೀಪ್‌
ಗ್ರಹ ಗತಿ
ದೈನಿಕ - ವಿಶೇಷವಾಗಿ ಗೃಹ ಸಂಬಂಧಿತ ಎಲ್ಲಾ ಸಂಗತಿಗಳು ಪೂರ್ಣಗೊಳ್ಳಬೇಕು ಎಂಬ ಮನೋಭಾವದೊಂದಿಗೆ ನೀವಿಂದು ಗಂಭೀರವದನರಾಗಿರುತ್ತೀರಿ. ನೀವು ಸಾಧಿಸಬೇಕೆಂದಿರುವ ವೃತ್ತಿ ಗುರಿಗಳತ್ತ ನೀವು ಕಣ್ಣುಹಾಯಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಾಮುಂಡೇಶ್ವರಿಯಲ್ಲಿ ಗದ್ಗದಿತರಾದ ಸಿದ್ದು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಭಾಷಣದ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ...
ಜನಪರವಾದ ಪ್ರಣಾಳಿಕೆ: ಕುಮಾರಸ್ವಾಮಿ
ಶಿಕಾರಿಪುರದಿಂದ ಮಾತ್ರ ಸ್ಪರ್ಧೆ: ಬಂಗಾರಪ್ಪ
ಮನರಂಜನೆ
ಚಿತ್ರ ಸುದ್ದಿ - ಇತ್ತೀಚೆಗೆ ರಮೇಶ್ ಅರವಿಂದ್ ನಿರ್ದೇಶನದ 'ಆಕ್ಸಿಡೆಂಟ್' ಚಿತ್ರ ಅದರ ಹೆಸರಿರುವ ಟೀಶರ್ಟ್, ಕ್ಯಾಪ್ ನೀಡಿ ಪ್ರಚಾರ ಮಾಡಿದರೆ, ಜಿಂದಗಿ ಚಿತ್ರದ ತುಣುಕುಗಳನ್ನು ತೋರಿಸಿ ಜನರನ್ನು ಆಕರ್ಷಿಸಲು ಪ್ರಯತ್ನಿಸಿತು. ಆದರೆ ಶಿವಧ್ವಜ್ ನಿರ್ದೇಶನದ 'ನೀನೇ ನೀನೇ' ಚಿತ್ರ ಇವೆಲ್ಲ
ಮುಂದೆ ಓದಿ|ಮತ್ತಷ್ಟು...
Marketplace