|
| ಕಿಚ್ಚ ಹುಚ್ಚಗೆ ಭರದ ಚಿತ್ರೀಕರಣ |
| ಮಂಗಳವಾರ, 19 ಮೇ 2009 ( 17:06 IST ) | |
ಸುದೀಪ್ ಅಭಿನಯದ 'ಕಿಚ್ಚ ಹುಚ್ಚ' ಚಿತ್ರಕ್ಕೆ ನಗರದಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು 'ಕಾಮಣ್ಣನ ಮಕ್ಕಳು' ಚಿತ್ರವನ್ನು ನಿರ್ದೇಶಿಸಿದ ಚಿ.ಗುರುದತ್ ನಿರ್ದೇಶಿಸುತ್ತಿದ್ದಾರೆ. ಇದು ತೆಲುಗಿನ ರೀಮೇಕಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿದ್ದಾರೆ.
ಇತ್ತೀಚೆಗೆ ಡಾಲರ್ಸ್ ಕಾಲೋನಿಯ ಮನೆಯೊಂದರಲ್ಲಿ ಸುದೀಪ್ ಹಾಗೂ ರಮ್ಯಾ ಭಾಗವಹಿಸಿದ್ದ ದೃಶ್ಯಕ್ಕೆ ಗುರುದತ್ ಆಕ್ಷನ್ ಕಟ್ ಹೇಳುತ್ತಿದ್ದರು. 'ಮುಸ್ಸಂಜೆ ಮಾತಿ'ನಲ್ಲಿ ಜೊತೆಯಾದ ನಂತರ ರಮ್ಯಾ ಹಾಗೂ ಸುದೀಪ್ ಮತ್ತೆ ಇಲ್ಲಿ ಒಂದಾಗಿ ನಟಿಸುತ್ತಿದ್ದಾರೆ.
ಸುದೀಪ್ ಅಭಿನಯದ, ರಾಂ ಗೋಪಾಲ್ ವರ್ಮಾ ನಿರ್ದೇಶದ 'ರಣ್' ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಚಿತ್ರದ ಹಾಡೊಂದರ ಬಗ್ಗೆ ವಿವಾದ ಎದ್ದಿತು. ರಣ್ ನಂತರ ಮತ್ತೊಂದು ಹಿಂದಿ ಚಿತ್ರದಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆಯಂತೆ. ಕಿಚ್ಚ ಹುಚ್ಚ ಚಿತ್ರದ ಶಾಸಕನ ಪಾತ್ರದಲ್ಲಿ ಪ್ರಣಯರಾಜ ಶ್ರೀನಾಥ್ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿ ಪಡೆದ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|