|
| ಚೆಲುವಿನ ಚಿಲಿಪಿಲಿಯಲ್ಲಿ ನಾರಾಯಣ್ |
| ಬುಧವಾರ, 18 ಮಾರ್ಚ್ 2009 ( 18:25 IST ) | |
ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಮತ್ತೆ ತಮ್ಮ ಮಗ ಪಂಕಜ್ ಮುಖಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಕಳೆದ ಬಾರಿ ಗುಟ್ಟಾಗಿ ಮುಹೂರ್ತ ಆಚರಿಸಿಕೊಂಡು ಚೈತ್ರದ ಚಂದ್ರಮ ಚಿತ್ರವನ್ನು ಪ್ರೇಕ್ಷಕ ಮಹಾಶಯ ಸಾರಸಗಟಾಗಿ ತಿರಸ್ಕರಿಸಿದ್ದ. ಅಮೂಲ್ಯಳ ಕ್ರೇಜನ್ನು ಬಂಡವಾಳವನ್ನಾಗಿಸಿ ತಮ್ಮ ಮಗನನ್ನು ಮೇಲೆ ತರುವ ನಾರಾಯಣ್ ಅವರ ಪ್ರಯತ್ನ ಕೂಡಾ ವರ್ಕ್ಔಟ್ ಆಗಿಲ್ಲ.
ಈಗ ಮತ್ತೆ ಮಗನನ್ನು ನಾಯಕನನ್ನಾಗಿಸಲು ನಾಣಿ ಮುಂದಾಗಿದ್ದಾರೆ. ಚಿತ್ರಕ್ಕೆ 'ಚೆಲುವಿನ ಚಿಲಿಪಿಲಿ' ಎಂದು ಹೆಸರಿಟ್ಟಿದ್ದಾರೆ. ಹಾಗಾಂತ ಇದು ಚೈತ್ರದ ಚಂದ್ರಮ ಚಿತ್ರದ ರೀಮೇಕಲ್ಲ. ಈ ಬಾರಿಯಾದರೂ ತಮ್ಮ ಮಗನನ್ನು ದಡ ಸೇರಿಸುತ್ತಾರೋ ನೋಡಬೇಕು.
ಕನ್ನಡ ಚಿತ್ರರಂಗದಲ್ಲಿ ಅನೇಕರು ತಮ್ಮ ಮಕ್ಕಳಿಗೆ ಒಂದು ನೆಲೆ ಒದಗಿಸಲು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ಪ್ರೇಕ್ಷಕ ಮಾತ್ರ ಅವರನ್ನು ಸ್ವೀಕರಿಸುತ್ತಿಲ್ಲ. ಮದನ್ ಪಟೇಲ್ ತಮ್ಮ ಮಗ ಮಯೂರ್ಗೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಮಗ ಆದಿತ್ಯನಿಗೆ, ರವಿಚಂದ್ರನ್ ತಮ್ಮ ಸಹೋದರ ಬಾಲಾಜಿಗೆ ಚಿತ್ರರಂಗದಲ್ಲಿ ಒಂದು ನೆಲೆ ಒದಗಿಸಲು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಸಾಲಿಗೆ ಈಗ ನಾರಾಯಣ್ ಕೂಡಾ ಸೇರಿದ್ದಾರೆ. ಏನಾಗುತ್ತೋ ಕಾದು ನೋಡಬೇಕು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭಫಲಗಳು ದೊರೆಯುತ್ತವೆ. ಕಾರ್ಯದಕ್ಷತೆಯಿಂದ ಕರ್ತವ್ಯ ನೇರವೇರಿಸಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯ ಕುಟುಂಬದ ಸದಸ್ಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಿಗಳಿಗೆ ಕೆಲಸದ ಒತ್ತಡ ತಪ್ಪದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಶಿವಮಣಿ ನಿರ್ದೇಶನದ 'ಜೋಶ್' ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಚಿತ್ರವನ್ನು ಎಸ್.ವಿ.ಬಾಬು ನಿರ್ದೇಶಿಸುತ್ತಿದ್ದಾರೆ. ಜೋಶ್ ಚಿತ್ರತಂಡ ಮೊದಲಿನಿಂದಲೂ |
| |
|
|
|
|
|
|