|
| ಧರಣಿಯಲ್ಲಿ ನಾಗಕಿರಣ್ |
| ಬೆಂಗಳೂರು, 26 ನವೆಂಬರ್ 2008 ( 17:02 IST ) | |
ಮರುಜನ್ಮ ಚಿತ್ರದ ಮೂಲಕ ಬೆಳಕಿಗೆ ಬಂದ ನಾಗಕಿರಣ್ಗೆ ಈಗ ಒಂದೊಂದೆ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ವಸಂತಕಾಲ ಚಿತ್ರ ಮಕಾಡೆ ಮಲಗಿದರೂ ಅವರಿಗೆ ಅವಕಾಶಗಳು ಕಡಿಮೆಯಾಗಿಲ್ಲ. ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ ಮಳೆ ಬರಲಿ ಮಂಜೂ ಇರಲಿ ಚಿತ್ರದಲ್ಲೂ ಇವರು ನಟಿಸಿದ್ದಾರೆ.
ಈ ನಡುವೆ ಅನಂತರಾಜು ನಿರ್ದೇಶನದ ಈ ವಾರ ತೆರೆ ಕಾಣಲಿರುವ ಹಾಸ್ಯ ಚಿತ್ರ ಮಸ್ತ್ ಮಜಾ ಮಾಡಿಯಲ್ಲೂ ಇವರು ನಟಿಸಿದ್ದಾರೆ. ಪಲ್ಲವಿ ಇಲ್ಲದ ಚರಣ ಇನ್ನೂ ಬಿಡುಗಡೆಗೊಂಡಿಲ್ಲ. ಈಗ ಧರಣಿ ಎಂಬ ಮತ್ತೊಂದು ಹೊಸ ಚಿತ್ರಕ್ಕೆ ನಾಗಕಿರಣ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರವನ್ನು ತಬ್ಬಲಿ ಚಿತ್ರ ನಿರ್ದೇಶಿಸಿದ ಲೋಕಿ ನಿರ್ದೇಶಿಸುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಬಿಡುಗಡೆಗೆ ಮೊದಲೇ ಇವರು ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.
ಧರಣಿ ಚಿತ್ರಕ್ಕೆ ಇವರೇ ಸ್ವತಃ ಚಿತ್ರಕಥೆ ಬರೆದಿದ್ದಾರೆ. ನೀಲ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ನಾಯಕಿಯರು ಹುಡುಕಾಟದಲ್ಲಿದ್ದಾರೆ. ಮೊದಲು ಬಂದ ಕನ್ನಡದ ನಾಯಕಿಯರಿಗೆ ಆದ್ಯತೆಯಂತೆ. ಯಾರು ಬರುತ್ತಾರೋ ಕಾದು ನೋಡಬೇಕು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ |
| |
|
|
|
|
|
|
|