|
| ಮಂದಾಕಿನಿಗೂ 'ಎ' ಕಾಟ! |
| ಬೆಂಗಳೂರು, ಶುಕ್ರವಾರ, 5 ಸೆಪ್ಟೆಂಬರ್ 2008 ( 16:42 IST ) | |
ಮೊಗ್ಗಿನ ಮನಸು, ಮಾದೇಶ ಚಿತ್ರಕ್ಕೆ 'ಎ' ಪ್ರಮಾಣ ನೀಡಿ ನಿರ್ದೇಶಕ, ನಿರ್ಮಾಕರ ಕೆಂಗಣ್ಣಿಗೆ ಗುರಿಯಾಗಿದ್ದ ಸೆನ್ಸಾರ್ ಮಂಡಳಿ ಇದೀಗ ಮತ್ತೆ ಸುದ್ದಿಯಲ್ಲಿದೆ.
ಬಿಡುಗಡೆಗೆ ಕಾದಿರುವ ಮಂದಾಕಿನಿ ಚಿತ್ರಕ್ಕೂ ಸೆನ್ಸಾರ್ ಮಂಡಳಿ 'ಎ' ಪ್ರಮಾಣ ಪತ್ರ ನೀಡಿರುವ ವಿರುದ್ಧ ಚಿತ್ರದ ನಿರ್ಮಾಪಕರು ಮುನಿಸಿಕೊಂಡಿದ್ದಾರೆ. ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಚಿತ್ರದ ಪ್ರಾರಂಭದಿಂದಲೇ ವಿವಾದದಲ್ಲಿ ಮುಳುಗಿತ್ತು. ನಿರೀಕ್ಷೆಗಿಂತಲೂ ಮೀರಿ ಹಣ ವ್ಯಯವಾಗಿದೆ. ಅವೆಲ್ಲಾ ಹಾಗಿರಲಿ, ಮಹಿಳಾ ಪ್ರಧಾನ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ ಎಂಬುದು ಅವರ ಗೋಳು.
ಈ ಚಿತ್ರ ಮುಗಿದ ಕೂಡಲೇ ಸ್ಟುಡಿಯೋ ಕಟ್ಟಬೇಕು, ಔಟ್ಡೋರ್ ಯೂನಿಟ್ ಇಟ್ಟುಕೊಳ್ಳಬೇಕು ಎಂದೆಲ್ಲಾ ಮಾತನಾಡುತ್ತಿದ್ದ ನಿರ್ಮಾಪಕರು ಅವೆಲ್ಲವನ್ನೂ ಮನಸ್ಸಿನಿಂದಾಚೆ ಎಸೆದಿದ್ದಾರೆ. ಇದೇ ಅವರ ಮೊದಲ ಚಿತ್ರ. ಅದೇ ಕೊನೆಯ ಚಿತ್ರವಂತೆ. ಒಟ್ಟಿನಲ್ಲಿ ಚಿತ್ರರಂಗದ ತಲೆಬುಡ ಗೊತ್ತಿಲ್ಲದೆ, ಚಿತ್ರ ಮಾಡಹೊರಟರೆ ಇದೇ ರೀತಿ ಆಗುವುದು ಎನ್ನುತ್ತೆ ಗಾಂಧಿನಗರ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|