ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಸಂಭಾವನೆ ಬಗ್ಗೆ ಚಿಂತೆಯಿಲ್ಲದ ಯಶ್, ಕಿಶೋರ್
ಬುಧವಾರ, 20 ಮೇ 2009   ( 15:47 IST )
ಚಿತ್ರರಂಗದಲ್ಲಿ ಸಂಭಾವನೆಗೆ ಜಗಳ ಆಗುತ್ತಿರುವುದು ಸಾಮಾನ್ಯ. ಸರಿಯಾಗಿ ಸಂಭಾವನೆ ನೀಡಿಲ್ಲ, ಅಥವಾ ಕಡಿಮೆ ಸಂಭಾವನೆ ನೀಡಿದ್ದಾರೆ… ಹೀಗೆ ಅನೇಕ ವಿವಾದಗಳು ಪದೇ ಪದೇ ಕೇಳಿ ಬರುತ್ತಿರುತ್ತವೆ. ಆದರೆ ಸಂಭಾವನೆ ಬಗ್ಗೆ ಚಿಂತೆ ಮಾಡದೇ ಚಿತ್ರ ಲಾಭ ಗಳಿಸಿದ ಮೇಲೆ ಸಂಭಾವನೆ ಕೊಡಿ ಎನ್ನುವ ಕಲಾವಿದರಾದರೂ ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಕಳ್ಳರ ಸಂತೆ ಚಿತ್ರದಲ್ಲಿ ನಟಿಸುತ್ತಿರುವ ಯಶ್ ಹಾಗೂ ಕಿಶೋರ್ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಅಗ್ನಿ ಶ್ರೀಧರ್ ಬಳಗ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಮನಾ ಕಿತ್ತೂರು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರ ನಿರ್ದೇಶನದ 'ಸ್ಲಂ ಬಾಲ' ಚಿತ್ರ ನೀರೀಕ್ಷಿತ ಗೆಲುವನ್ನು ಸಾಧಿಸಲಿಲ್ಲ. ಈ ಬಾರಿ ರಾಜಕೀಯ ವಿಡಂಬನಾತ್ಮಕ ಚಿತ್ರವನ್ನು ಮಾಡುತ್ತಿದ್ದಾರೆ.ಚಿತ್ರದ ಪೋಸ್ಟರ್‌ನಲ್ಲೂ ವಿಧಾನಸೌಧವನ್ನು ತೋರಿಸಲಾಗಿದೆ. ಅದರೊಳಗೆ ಎಂಥೆಂಥ ಮಂದಿ ಇರುತ್ತಾರೆ, ಅವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸುತ್ತಾರಂತೆ.

ಈ ಚಿತ್ರದಲ್ಲಿ ರಾಕಿ ಖ್ಯಾತಿಯ ಯಶ್ ಹಾಗೂ ಕಿಶೋರ್ ನಟಿಸುತ್ತಿದ್ದಾರೆ. ಆದರೆ ಅವರು ಸಂಭಾವನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಂತಹ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ಅದೃಷ್ಟ. ಅಂದ ಮೇಲೆ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಚಿತ್ರಕ್ಕೆ ಲಾಭ ಬಂದ ಮೇಲೆ ಸಂಭಾವನೆ ನೀಡಿದರೆ ಸಾಕು ಎನ್ನುತ್ತಾರೆ ಯಶ್ ಹಾಗೂ ಕಿಶೋರ್. ಚಿತ್ರದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಖೇಣಿ ಜೀವನ ಚಿತ್ರ
ಬೀಗರಾಗುವ ಕುಮಾರಸ್ವಾಮಿ-ಯಡಿಯ‌ೂರಪ್ಪ !
ಬರ್ತಾ ಇದೆ ಪೊಗರು
ರಮೇಶ್ ಯಾದವ್ 'ನಾಯಕಿ' 'ತೆರೆಮರೆಯಲ್ಲಿ'
ಉಪ್ಪಿ ಈಗ ಲಂಡನ್ ಗೌಡ
'ಈ ಪ್ರೀತಿ ಯಾರಿಗೋಸ್ಕರ'ದಲ್ಲಿ ರಘುವೀರ್
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...