|
| ರಮೇಶ್ ಯಾದವ್ 'ನಾಯಕಿ' 'ತೆರೆಮರೆಯಲ್ಲಿ' |
| ಮಂಗಳವಾರ, 19 ಮೇ 2009 ( 17:00 IST ) | |
ಕನ್ನಡದಲ್ಲಿ ಹೊಸ ಹೊಸ ಟೈಟಲ್ಗಳನ್ನು ಹೊಂದಿರುವ ಚಿತ್ರಗಳು ದಿನದಿಂದ ದಿನಕ್ಕೆ ಬರುತ್ತಲೇ ಇವೆ. ಇದರಲ್ಲಿ ಹೆಚ್ಚಿನವು ವಿವಾದ ಸೃಷ್ಟಿಸಿಕೊಂಡು ಸೆನ್ಸಾರ್ ಮಂಡಳಿ ಜೊತೆ ಗುದ್ದಾಡಿ ಬರುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆ ಹೊಡಿಮಗ. ಈಗ ಮತ್ತೊಂದು ಟೈಟಲ್ ನೋಂದಣಿಯಾಗಿದೆ.
ಅದು 'ನಾಯಕಿ'. ಜೊತೆಗೆ "ತೆರೆಮರೆಯಲ್ಲಿ' ಎಂಬ ಉಪಶೀರ್ಷಿಕೆಯನ್ನು ಕೂಡಾ ಹೊಂದಿದೆ.ಅಂದಹಾಗೆಅನೇಕ ಊಹಾಪೋಹಗಳು ಬರುತ್ತಿವೆ. ಶ್ರುತಿ-ಮಹೇಂದರ್ ಜೀವನದಲ್ಲಿ ಎದ್ದ ವಿವಾಹ ವಿಚ್ಛೇದನದ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಗುತ್ತದೆ ಎಂಬ ಸುದ್ದಿ ಗಾಂಧಿನಗರ ತುಂಬಾ ಹಬ್ಬಿದೆ.
ಆದರೆ ಈ ಬಗ್ಗೆ ಟೈಟಲ್ ನೋಂದಾಯಿಸಿದ ರಮೇಶ್ ಯಾದವ್ ಅವರನ್ನು ಕೇಳಿದರೆ, 'ನಾನು ಟೈಟಲ್ ನೋಂದಾಯಿಸಿದ್ದು ನಿಜ. ಆದರೆ ಕಥೆ ಇನ್ನಷ್ಟೇ ಸಿದ್ಧವಾಗಬೇಕಿದೆ' ಎನ್ನುತ್ತಾರೆ. ಈ ಹಿಂದೆ ಇವರು 'ಅಕ್ಕ-ತಂಗಿ' ಚಿತ್ರ ನಿರ್ಮಿಸಿದ್ದರು. ಈ ಚಿತ್ರವನ್ನು ಮಹೇಂದರ್ ನಿರ್ದೇಶಿಸಿ ಶ್ರುತಿ ನಟಿಸಿದ್ದರು. ಇದೇ ಇವರಿಬ್ಬರ ಕೊನೆಯ ಚಿತ್ರ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|