|
| 'ಈ ಪ್ರೀತಿ ಯಾರಿಗೋಸ್ಕರ'ದಲ್ಲಿ ರಘುವೀರ್ | |
ಚಿತ್ರರಂಗವೆಂದರೆ ಅದೊಂದು ಮಾಯಲೋಕ. ಅಲ್ಲಿ ಯಾರು ಯಾವಾಗ ಕಳೆದು ಹೋಗುತ್ತಾರೆ ಎಂಬುದನ್ನು ಹೇಳಲಾಗದು. ಕಳೆದ 10 ವರ್ಷಗಳಿಂದ ಗಾಂಧಿನಗರದಿಂದ ದೂರವಿದ್ದ ರಘುವೀರ್ ಈಗ ಮತ್ತೆ ಬಂದಿದ್ದಾರೆ.
'ಈ ಪ್ರೀತಿ ಯಾರಿಗೋಸ್ಕರ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ 27 ರಿಂದ ಚಿತ್ರೀಕರಣ ಆರಂಭ. ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ಬೆಳಕಿಗೆ ಬಂದು 'ಶೃಂಗಾರ ಕಾವ್ಯ'ದಂತಹ ಚಿತ್ರಗಳನ್ನು ನೀಡಿದ್ದ ರಘುವೀರ್ ಯಾಕೋ 10 ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಅವರಿಂದ ಬರುವ ಉತ್ತರ 'ಪತ್ನಿ ಸಿಂಧು ಸಾವು'. ತನ್ನ ಪತ್ನಿಯ ಸಾವಿನಿಂದ ಬೇಸತ್ತು ಚಿತ್ರರಂಗದಿಂದ ದೂರ ಉಳಿದಿದದ್ದರು.
ಈಗ ಸ್ವತಃ ಚಿತ್ರವನ್ನು ತಾವೇ ನಿರ್ಮಿಸಿ ನಟಿಸುತ್ತಿದ್ದು, ರಾಜಾ ಎಂಬವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸ್ವಾತಿ ಎಂಬ ನಾಯಕಿಯನ್ನು ಪರಿಚಯಿಸುತ್ತಿದ್ದಾರೆ. ಅಂದಹಾಗೆ ಇವರು ಭಾನುವಾರ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ಎರಡನೇ ಇನ್ನಿಂಗ್ಸ್ ಆಶಾದಾಯಕವಾಗಿರಲಿ ಎಂದು ಆಶಿಸೋಣ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|