ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ದುಬೈಯಲ್ಲಿ ಕನ್ನಡದ ಕಂಪು
ಶನಿವಾರ, 16 ಮೇ 2009   ( 18:16 IST )
ಕನ್ನಡದ ವರನಟ ರಾಜ್‌ಕುಮಾರ್ ಅವರ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಇಂದಿಗೂ ಎವರ್‌ಗ್ರೀನ್. ಈಗ ಇದೇ ಹಾಡಿಗೆ ಅವರ ಪುತ್ರ ಶಿವರಾಜಕುಮಾರ್ ಹೆಜ್ಜೆ ಹಾಕಿದ್ದಾರೆ.

ರಘುರಾಮ ನಿರ್ದೇಶನದ 'ಚೆಲುವೆಯೇ ನಿನ್ನ ನೋಡಲು' ಚಿತ್ರದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡನ್ನು ದುಬೈನಲ್ಲಿ ನಡೆದ ಕನ್ನಡ ರಾಜ್ಯೌತ್ಸವ ದಿನ ಚಿತ್ರೀಕರಣ ಮಾಡಲಾಗಿದೆ.

'ಇದನ್ನು ಚಿತ್ರೀಕರಣ ಮಾಡುವಾಗ ಶಿವಣ್ಣ ಬಿಳಿಪಂಚೆ ಮತ್ತು ಕಚ್ಚೆ ತೊಟ್ಟಿದ್ದರು. ಕಿತ್ತಳೆ ಬಣ್ಣದ ರುಮಾಲು ಧರಿಸಿ ಡ್ಯಾನ್ಸ್ ಮಾಡಿದರು. ಮೂಲ ಹಾಡಿನಲ್ಲಿ ಡಾ. ರಾಜ್‌ಕುಮಾರ್ ಜಟಕಾ ಬಂಡಿ ಏರಿ ಹುಟ್ಟಿದರೆ .. ಹಾಡನ್ನು ಹಾಡಿದ್ದರು. ಆದರೆ ಈ ರಿಮಿಕ್ಸ್ ಹಾಡಿನಲ್ಲಿ ಶಿವಣ್ಣ ಐಷಾರಾಮಿ ಕಾರಿನಲ್ಲಿ ಬಂದು ಇಳಿಯುತ್ತಾರೆ. ಆಗ ದುಬೈನ ಕನ್ನಡಿಗರು ಕನ್ನಡದ ಬಾವುಟ ಹಿಡಿದು ಈ ಹಾಡಿನೊಂದಿಗೆ ಹೆಜ್ಜೆ ಹಾಕಿದರು ಎಂದು ಹಾಡಿನ ಸನ್ನಿವೇಶವನ್ನು ವಿವರಿಸುತ್ತಾರೆ ನಿರ್ದೇಶಕ ರಘು.

ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಯಾರು ಮಾಡದಂತಹ ಚಿತ್ರವನ್ನು ನಾವು ಮಾಡುತ್ತಿದ್ದೇವೆ. ಒಂದೇ ಚಿತ್ರದಲ್ಲಿ ರಾಜ್ ಅವರ ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಬಂಗಾರದ ಮನುಷ್ಯದ ಗೆಟಪ್ಗಳನ್ನು ನಾವು ಕಾಣಬಹುಷದು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಅವರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚಕ್ರವ್ಯೂಹದ ವಿಶೇಷ ಪಾತ್ರದಲ್ಲಿ ಸುಧಾರಾಣಿ
ಹೊಡಿಮಗ ಚಿತ್ರದ ದೃಶ್ಯಗಳಿಗೆ ಶಿವಣ್ಣ ಪಶ್ಚಾತ್ತಾಪ
ಜೊತೆಗಾರ ವಿವಾದ
ತೆಲುಗಿನ ಇಲಿಯಾನಾ ಕನ್ನಡಕ್ಕೆ
ಪ್ರೇಮಿಸಂ ಮೊರೆ ಹೋದ ರತ್ನಜ
ಸವಾರಿ ಭರ್ಜರಿ ಪ್ರದರ್ಶನ
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಫಲಿತಾಂಶ-ಹೃದಯಬಡಿತ ನಾರ್ಮಲ್ ಆಗಿದೆ: ಖರ್ಗೆ
ಹಾರ್ಟ್‌‌ಬೀಟ್ ನಾರ್ಮಲ್' ಆಗಿಯೇ ಇದೆ. ನಾನು ಈಗಾಗಲೇ ಒಂಬತ್ತು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇನೆ...
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಫಲಿತಾಂಶಕ್ಕಾಗಿ 'ರಿಯಲ್ ಟೈಂ ಸಾಫ್ಟ್‌ವೇರ್'
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...