|
| ಶಿವರಾಜ್ ಅಭಿನಯದ 'ನಂದ' ಬಿಡುಗಡೆಗೆ ಸಿದ್ಧ |
| ಶನಿವಾರ, 3 ಜನವರಿ 2009 ( 17:58 IST ) | |
ಶಿವರಾಜ್ಕುಮಾರ್ ಅಭಿನಯದ 'ನಂದ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಲೀ ಮೆರಿಡಿಯನ್ ಹೊಟೇಲ್ನಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೊಂಡಿತ್ತು. ವೇದಿಕೆಯ ಮೇಲೆ ರಾಜಕಾರಣಿಗಳು, ಚಿತ್ರೋದ್ಯಮಿಗಳ ಇದ್ದರು.
ಚಿತ್ರದ ನಿರ್ಮಾಪಕ ಮಾಹೀನ್ ಹುರುಪಿನಿಂದ ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ಮಾಜಿ ಸಚಿವ ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್, ಪುಟ್ಟಣ್ಣ, ಬಾಲಣ್ಣ, ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ನಿರ್ದೇಶಕ ಅನಂತರಾಜು ಸಂಗೀತ ನಿರ್ದೇಶಕ ವಿ.ಮನೋಹರ್ ಹಾಜರಿದ್ದರು.
ಇದು ಶಿವರಾಜಕುಮಾರ್ ಅವರಿಗೆ ಹೊಸ ಲುಕ್ ನೀಡಲಿದ್ದು, ಇದೊಂದು ವಿಶಿಷ್ಟ ಚಿತ್ರ ಎಂದು ನಿರ್ದೇಶಕ ಅನಂತರಾಜು ಹೇಳಿದರು. ಶಿವರಾಜ್ ಕುಮಾರ್ ಹಾಗೂ ವಿ.ಮನೋಹರ್ ನಿರ್ಮಾಪಕ ಮಾಹೀನ್ ಅವರ ಆದರಾತಿಥ್ಯವನ್ನು ನೆನೆದರು. ಸೆಟ್ನಲ್ಲಿ ಎಲ್ಲರಿಗೂ ಬಿರ್ಯಾನಿ ಸಿಗುತಿತ್ತು ಎಂದು ಶಿವಣ್ಣ ಹೇಳಿದರೆ, ಮನೆಗೆ ರಾಜಸ್ತಾನಿ ಸ್ವೀಟ್ಸ್ ಕಳಿಸಿಕೊಟ್ಟ ನಿರ್ಮಾಪಕರನ್ನು ಮನೋಹರ್ ಬಾಯ್ತುಂಬ ಹೊಗಳಿದರು.ಮಾಹಿನ್ ದಿಲ್ದಾರ್ ನಿರ್ಮಾಪಕ ಎಂದರು ಶಿವಣ್ಣ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|