ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಭೂತ ಬಂಗಲೆಯಲ್ಲಿ ಕಲಾಕಾರ್
ಗುರುವಾರ, 4 ಡಿಸೆಂಬರ್ 2008   ( 18:24 IST )
ಹರೀಶ್‌ರಾಜ್ ನಿರ್ದೇಶಿಸಿ ನಟಿಸುತ್ತಿರುವ 'ಕಲಾಕಾರ್' ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಹರೀಶ್ ರಾಜ್ ಅವರು ಬಹು ದಿನಗಳಿಂದ ಚಿತ್ರ ನಿರ್ದೇಶಿಸಬೇಕೆಂಬ ಕನಸು ಕಂಡಿದ್ದರು. ಈಗ ಅದು ನನಸಾಗಿದೆ. ದಿ ಕ್ಲಬ್ ಹಾಗೂ ತಾವರೆಕೆರೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಇಲ್ಲಿನ ಭೂತ ಬಂಗಲೆಯಲ್ಲಿ ಕವಿರಾಜ್ ಬರೆದಿರುವ 'ಆಯಾ ಆಯಾ ಸೂಪರ್ ಸ್ಟಾರ್ ಇವನೇ ನನ್ನ ಸೂಪರ್‌ಸ್ಟಾರ್ ಹೊತ್ತುಕೊಂಡು ಕನಸಿನ ಮ‌ೂಟೆ ಬಂದು ನಿಮ್ಮ ಎದುರಿಗೆ ನಿಂತೆ ಹರಸಿ ನನ್ನ ಹೆತ್ತೊರಂತೆ ಬೆಳೆಸಿ ನಿಮ್ಮ ಮಗನಂತೆ..' ಎಂಬ ಹಾಡಿಗೆ ಭೂತ ಬಂಗಲೆಯಲ್ಲಿ ಸುಮನ್‌ರಂಗನಾಥ್ ಹಾಗೂ ಹರೀಶ್‌ರಾಜ್ ಹೆಜ್ಜೆ ಹಾಕಿದರು.

ಚಿತ್ರರಂಗದಿಂದ ದೂರವಾಗಿದ್ದ ಸುಮನ್ ರಂಗನಾಥ್ ಬುದ್ದಿವಂತ ಚಿತ್ರದ ಮ‌ೂಲಕ ಮತ್ತೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಿತ್ರಕ್ಕೆ ಸ್ವತಃ ಹರೀಶ್‌ರಾಜ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ರಾಮಚಂದ್ರ ಕ್ಯಾಮರಾ ಕೈಚಳಕವಿದ್ದು, ಚಿತ್ರದಲ್ಲಿ ರಾಧಿಕಾ ಗಾಂಧಿ, ಸುಧಾನರಸಿಂಹ ರಾಜು, ಅವಿನಾಶ್, ರಾಜನ್, ವಿಶ್ವ ಮೊದಲಾದವರು ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮದಕರಿಗೆ ಶಬಾಸ್
ಲಗೋರಿ ಡ್ರಾಪ್?
ಮತ್ತೆ ಪ್ರೇಮಾಂಕುರ
ಶ್ರುತಿಯ ಅಕ್ಕ-ತಂಗಿ
ನಾರಾಯಣ್‌ರ ಮತ್ತೊಂದು ಚಿತ್ರ
ಅಂತಿಮ ಹಂತದಲ್ಲಿ ಸರ್ಕಸ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...