ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಬಿಡ್ಡನ ಕಣ್ಣೀರ ಕಥೆ
ಮಂಗಳವಾರ, 2 ಡಿಸೆಂಬರ್ 2008   ( 20:03 IST )
ಆದಿ ಲೋಕೆಶ್ ನಾಯಕರಾಗಿ ನಟಿಸಿದ ಬಿಡ್ಡ ಚಿತ್ರ ಈ ವಾರ ತೆರೆ ಕಂಡಿದೆ. ಮಾಸ್‌ಗೆ ಮಾಸ್ ಎಂಬ ಟ್ಯಾಗ್ ಲೈನ್‌ನೋಡಿ ರಕ್ತಪಾತ ಹರಿಸಿದ ಚಿತ್ರವನ್ನು ಜನ ಇಷ್ಟಪಡಲಿಲ್ಲ. ಚಿತ್ರದಲ್ಲಿ ಬಕೆಟ್‌ಗಟ್ಟಲೇ ರಕ್ತಹರಿಸಿದ ಕೂಡಲೇ ಚಿತ್ರ ಹಿಟ್ ಆಗುವಂತಿದ್ದರೆ ದೊಡ್ಡ ಬಜೆಟ್ ಮಾದೇಶ ಸೋಲುತ್ತಿರಲಿಲ್ಲ.

ಚಿತ್ರ ಬಿಡುಗಡೆಯಾದ ದಿನ ನಿರ್ದೇಶಕ ವಿಶ್ವ ಪತ್ರಿಕಾಗೋಷ್ಠಿ ಕರೆದಿದ್ದರು. ಬಿಡ್ಡ ಚಿತ್ರ ಸೆಟ್ಟೇರಿ ಮೂರು ವರ್ಷ ಕಳೆದರೂ ಬಿಡುಗಡೆ ತಡವಾದ ಬಗ್ಗೆ ಅವರು ಹೇಳಿಕೊಂಡರು.

ಆದಿ ಲೋಕೇಶ್ ಕಾಲ್ಶೀಟ್ ಸಿಕ್ಕಿತ್ತು. ಮುಹೂರ್ತ ಸಲೀಸಾಗಿ ಮುಗಿಯಿತು. ಆದರೆ ನಿರ್ಮಾಪಕ ರವಿ ಮಾತ್ರ ಅರ್ಧಕ್ಕೆ ಕೈ ಚೆಲ್ಲಿದರು. ಅವರ ಮಗನೇ ನಾಯಕನಾಗಬೇಕೆನ್ನುವುದು ಅವರ ಬಯಕೆಯಾಗಿತ್ತು. ಆದರೆ ಜೋಗಿ ನಂತರ ಬಿಡ್ಡ ಎಂಬ ಹೆಸರಿನಿಂದ ಆದಿ ಪ್ರಸಿದ್ಧರಾದರು. ನಿರ್ಮಾಪಕರು ಮಗನನ್ನು ಮುಂದೆ ಬಿಟ್ಟು ಕ್ಯಾತೆ ತೆಗೆದರು ಎಂದು ವಿಶ್ವ ಹೇಳುತ್ತಿದ್ದರೆ ಅವರ ಮುಖದಲ್ಲಿ ಬೇಸರ ಮೂಡಿ ಮರೆಯಾಗುತಿತ್ತು.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ನಿರ್ಮಾಪಕರು ಟಿವಿ, ಸ್ಯಾಟ್‌ಲೈಟ್ ಹಕ್ಕುಗಳನ್ನು ಮಾರಿ ಬಿಟ್ಟರು. ಕೊನೆಗೆ ಸ್ನೇಹಿತ ಚಂದ್ರಕುಮಾರ್ ಬಿಡುಗಡೆಗೆ ಬೆನ್ನೆಲುಬಾಗಿ ನಿಂತರು. ಈ ಮಧ್ಯೆ ಆದಿ ಕೂಡಾ ಬಿಜಿಯಾದರು. ದುನಿಯಾ ಬಿಡುಗಡೆಯಾದ ನಂತರ ರಂಗಾಯಣ ರಘು ಕೂಡಾ ಕೆಲ ತಿಂಗಳು ಆಟವಾಡಿಸಿದರು ಎಂದು ತಾವು ಪಟ್ಟ ಕಷ್ಟವನ್ನು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಚಂದ್ರಕುಮಾರ್ ಹಾಗೂ ವಿಶ್ವನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬರ್ತಾವ್ನೆ ಪಾನ್ವಾಲ್
ನಿರ್ದೇಶಕನಾದ ನವೀನ್‌‌ಕೃಷ್ಣ
ಗೋವಾದಿಂದ ಮರಳಿ..
ರಮ್ಯಾ ಹುಟ್ಟುಹಬ್ಬ
ಹಿಂದಿಗೆ ಸೈನೈಡ್
ಸದ್ಯದಲ್ಲೇ ಹೀರೋವಾಗಿ ಜಗ್ಗೇಶ್ ಪುತ್ರ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...