|
| ಅಭಿಮನ್ಗೆ ಸಕತ್ ದಿಮಾಂಡು |
| ಬೆಂಗಳೂರು, ಶುಕ್ರವಾರ, 10 ಅಕ್ಟೋಬರ್ 2008 ( 16:43 IST ) | |
ತಾಜ್ಮಹಲ್ ಸಂಗೀತ ನಿರ್ದೇಶಕ ಅಭಿಮನ್ ಅವರ ಅವಕಾಶದ ದಿಡ್ಡಿ ಬಾಗಿಲು ಈಗ ತೆರೆದಿದೆ. ಅವರೇ ಹೇಳುವ ಪ್ರಕಾರ 34 ಅವಕಾಶಗಳು ಅವರ ಮನೆ ಬಾಗಿಲುವರೆಗೆ ಬಂದಿವೆ. ಆದರೆ ಅವೆಲ್ಲವನ್ನು ಅವರು ಒಪ್ಪಿಕೊಳ್ಳಲಿಲ್ಲ.
ಆದರೂ ಆರು ಚಿತ್ರಗಳು ಅವರ ಕೈಯಲ್ಲಿವೆ. ರಾಮುವಿನಂತಹ ದೊಡ್ಡ ನಿರ್ಮಾಪಕರು ಈಗ ಅಭಿಮನ್ ಅವರನ್ನು ಕರೆದಿದ್ದಾರೆ. ಈಗ ಬಗ್ಗೆ ಅಭಿಮನ್ ಅವರು ಹೇಳುವುದಿಷ್ಟು, 'ಈ ಬಗ್ಗೆ ಸಂತೋಷವೂ ಇಲ್ಲ, ಬೇಸರವೂ ಇಲ್ಲ. ಈ ಹಿಂದೆ ಸಾಕಷ್ಟು ಒದ್ದಾಡಿದ್ದೇನೆ. ಒಳ್ಳೇ ಹಾಡು ಕೊಟ್ಟಿದ್ದೇನೆ. ಆಗ ಯಾರೂ ಕರೆದಿಲ್ಲ. ಅದರಲ್ಲಿ ಅವರ ತಪ್ಪೂ ಇಲ್ಲ. ಯಾಕೆಂದರೆ ಎಲ್ಲರೂ ನಮ್ಮ ಹಿಂದಿನ ರೆಕಾರ್ಡ್ ನೋಡುತ್ತಾರೆ. ಹಿಟ್ ಚಿತ್ರ ಕೊಟ್ಟರಷೇ ಅವಕಾಶ ಸಿಗೋದು..' ಎನ್ನುತ್ತಾರೆ.
ಅಭಿಮನ್ ಅವರು ಸದ್ಯ ಕಿರಣ ಎಂಬ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಗೀತ ಹಾಗೂ ಸಂಭಾಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಚಿತ್ರದಲ್ಲಿ ಅವರ ಸಹೋದರ ಪ್ರಣವ್ ರಾಯ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|