|
| ಜನ್ಮದ ನಾಯಕಿ ಬದಲು |
| ಬೆಂಗಳೂರು, ಮಂಗಳವಾರ, 1 ಜುಲೈ 2008 ( 15:31 IST ) | |
ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ನಾಯಕಿಯನ್ನು ಬದಲಿಸಿದ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸಿದರೆ, 'ಆಕೆಗೆ ಸರಿಯಾಗಿ ನಟನೆ ಬರುತ್ತಿರಲಿಲ್ಲ. ಒಂದು ದೃಶ್ಯಕ್ಕೆ 20 ರಿಟೇಕ್ ತೆಗೆಯಬೇಕಿತ್ತು. ಅದಕ್ಕಾಗಿ ಬದಲಿಸಿದೆ' ಎನ್ನುತ್ತಾರೆ ನಿರ್ದೇಶಕ ಚಕ್ರವರ್ತಿ. ಈ ಹಿಂದೆ ಚಿತ್ರದ ಛಾಯಾಗ್ರಾಹಕರನ್ನು ಕೂಡಾ ಬದಲಿಸಿದ್ದರು. ಆ ಬಗ್ಗೆ ಕೇಳಿದರೆ ಅದಕ್ಕೂ ಉತ್ತರ ರೆಡಿ, ಅವರು ತುಂಬಾ ಸ್ಲೋ . ಚಿತ್ರದ ಹಿತದೃಷ್ಟಿಯಿಂದ ಅವರನ್ನು ಬದಲಿಸಬೇಕಾಯಿತು ಎಂದರು.
ಸ್ಮಶಾನ ಕಾಯುವ ದೃಶ್ಯವನ್ನು ಅಲ್ಲಿನ ಹುಡುಗನನ್ನೇ ಬಳಸಿ ಚಿತ್ರೀಕರಿಸಿದ್ದಾರಂತೆ. ಒಂದೇ ಟೇಕಲ್ಲಿ ಆ ದೃಶ್ಯ ಮುಗಿದಿದೆಯಂತೆ. ಚಿತ್ರವನ್ನು ಆನೇಕಲ್ ಬಾಲರಾಜ್ ನಿರ್ಮಿಸುತ್ತಿದ್ದು, ಅವರ ಸಂತೋಷ್ ನಟಿಸುತ್ತಿದ್ದಾರೆ. ಇವರು ಹಿಂದೆ ಕೆಂಪದಲ್ಲಿ ನಟಿಸಿದ್ದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್ರನ್ನು ಟೀಕಿಸಿದರು. |
| |
|
|
|
|
|
|
|