|
| ಗೂಳಿಯಾಗಿ ನುಗ್ಗಲಿರುವ ಸುದೀಪ್! |
| ಬೆಂಗಳೂರು, ಬುಧವಾರ, 6 ಫೆಬ್ರವರಿ 2008 ( 15:24 IST ) | |
ನಟ ಸುದೀಪ್ ಮೈ ಆಟೋಗ್ರಾಫ್ ಚಿತ್ರದ ನಂತರ ಶಾಂತಿನಿವಾಸ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ನಿರ್ಮಿಸಿ ನಿರ್ದೇಶಿಸಿದ್ದರು. ತುಂಬಾ ಕ್ಲಾಸಿಕ್ ಅಗಿ ರೂಪುಗೊಂಡಿದ್ದ ಆ ಚಿತ್ರ ಅದೇಕೋ ಪ್ರೇಕ್ಷಕರನ್ನು ಸೆಳೆಯಲಿಲ್ಲ.
ಇದಾದ ನಂತರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದರಾದರೂ, ಚಿತ್ರವೇ ಸೋತಿದ್ದರಿಂದ ಸುದೀಪ್ ಶ್ರಮ ವ್ಯರ್ಥವಾಯಿತು.
ಈಗ ಗೂಳಿ ಚಿತ್ರದ ಮೂಲಕ ಮತ್ತದೇ ಢಿಶುಂ ಢಿಶುಂ ಟ್ರಾಕ್ಗೆ ಸುದೀಪ್ ಮರಳಿದ್ದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇಂಥ ಚಿತ್ರಗಳ ನಿರ್ಮಾಣಕ್ಕೆ ರಾಮು ಪ್ರಸಿದ್ಧರು, ಇಂಥ ಚಿತ್ರಗಳ ನಿರ್ದೇಶನದಲ್ಲಿ ಪಿ.ಸತ್ಯಾ ಸಿದ್ಧಹಸ್ತರು.
ಹಾಗಾಗಿ ನಿರಾಸೆಗೆ ಅವಕಾಶವಿಲ್ಲ ಎಂಬುದು ಅಭಿಮಾನಿಗಳ ನಂಬುಗೆ. ಜೊತೆಗೆ ರಾಮುರವರ ನಿರ್ಮಾಣದ ಮಲ್ಲ ಚಿತ್ರವನ್ನು ಬಿಟ್ಟರೆ ಅವರ ಇತ್ತೀಚಿನ ಚಿತ್ರಗಳಾವುವೂ ಅವರಿಗೆ ಲಾಭ ತಂದುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಗೂಳಿ ಚಿತ್ರವನ್ನು ರಾಮು ಶ್ರದ್ದೆಯಿಂದಲೇ ನಿರ್ಮಿಸಿರುತ್ತಾರೆ ಎಂಬುದು ಉದ್ಯಮದ ವಿಶ್ವಾಸ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೇಶ - ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಕಂದಹಾರ್ಗೆ ಅಪಹರಣ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಮೂವರಿಗೆ ನಗರದ ಕೋರ್ಟೊಂದು ಹತ್ಯೆ ಮತ್ತು ಒಳಸಂಚಿನ ಆರೋಪಕ್ಕೆ ಸಂಬಂದಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಬ್ದುಲ್ |
| |
|
|
|
|
 | | NRB |
| | |
| |
|
|
|
|
|
| ಆಟೋಟ - ಕ್ರಿಕೆಟ್ ಜಗತ್ತಿನ ಜೀವಂತ ದಂತಕತೆ, ರನ್ ಮಷಿನ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಮಂಗಳವಾರ ಸಿಬಿ ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾಧನೆಯ |
| |
|
|
|
|
|
|
|