ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಗ್ರಹ ಗತಿ ವಾಸ್ತು
ಪ್ರವೇಶ ದ್ವಾರದೆದುರು ಪ್ರಭಾವ ಬಿರುವ ಚಿತ್ರವಿರಲಿ!
ಬುಧವಾರ, 27 ಜೂನ್ 2007   ( 20:22 IST )
ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿದ್ದರೆ ಚೆನ್ನ. ಮನೆಯ ಪ್ರಮುಖ ಸ್ಥಾನ ಇದು ಮನೆಯ ಪ್ರಮುಖ ಸ್ಥಾನ ಆಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ ಎಂತು ವಾಸ್ತುಶಾಸ್ತ್ರ ಹೇಳುತ್ತದೆ.

ಪ್ರವೇಶ ದ್ವಾರದ ಹೊರಗಾಗಲಿ, ಒಳಗಾಗಲಿ ಯಾವುದೇ ಅಡೆತಡೆಗಳಿರಬಾರದು. ಈ ಅಡೆತಡೆಗಳಿದ್ದರೆ ಒಳ್ಳೆಯ ಅದೃಷ್ಟ ಕೂಡ ದುರದೃಷ್ಟವಾಗಿ ಪರಿವರ್ತನೆ ಹೊಂದುತ್ತದೆ ಎಂಬುವ ನಂಬಿಕೆ ಚಾಲ್ತಿಯಲ್ಲಿದೆ. ಸರಿಯಾದ ಪ್ರವೇಶ ದ್ವಾರ ಸಾಕಷ್ಟು ಬೆಳಕಿರುವ, ಅಡೆತಡೆಯಿಲ್ಲದ ಸೂಕ್ತ ಕೋಣೆಗೆ ತೆರೆದು ಕೊಂಡಿರುವಂತಿರಬೇಕು.

ಬಾಗಿಲಿನ ಬಳಿ ಪಾದರಕ್ಷೆಗಳನ್ನಿಡುವ ಪುಟ್ಟದಾದ ಕಪಾಟು ಮತ್ತಿತರ ಅಡೆತಡೆಗಳನ್ನೂ ಸಹ ಇರಿಸಬಾರದು. ಅದೇ ರೀತಿ, ಪ್ರವೇಶ ದ್ವಾರದ ಎದುರಿಗೇ ಕಟ್ಟಡ, ಕಂಬಗಳು ಇರುವುದು ಕೂಡ ದುರದೃಷ್ಟಕರ. ಇಂಥ ಅಡೆ ತಡೆಯಿದ್ದರೆ ಅದು ಗಂಭೀರವಾದುದು. ಆದ್ದರಿಂದ ತಕ್ಷಣವೇ ಬಾಗಿಲು ಬದಲಾಯಿಸಬೇಕಾಗುತ್ತದೆ.

ಫ್ಲ್ಯಾಟ್‌ಗಳಲ್ಲಿ ಹೆಚ್ಚಾಗಿ ಪ್ರವೇಶ ದ್ವಾರದ ಹೊರಗೆ ಇಂತಹ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಪ್ರವೇಶ ದ್ವಾರದ ಎದುರಿಗೇ ಮೆಟ್ಟಿಲುಗಳಿರುವುದು. ಹೀಗಿದ್ದರೆ ಆ ಮನೆಯಲ್ಲಿರುವವರಿಗೆ ದೋಷ, ಕಷ್ಟ ನಷ್ಟಗಳು ಸಾಮಾನ್ಯವಾಗಿರುತ್ತದೆ. ಆ ಮೇಲೆ, ಕೆಲವರು ಪ್ರವೇಶ ದ್ವಾರದ ಎದುರಿಗೇ ಕನ್ನಡಿ ಇರಿಸುತ್ತಾರೆ.

ಇದು ಅತ್ಯಂತ ಹಾನಿಕಾರಕವಾಗಿದೆ. ಯಾಕೆಂದರೆ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುವ ಒಳ್ಳೆಯ ಊರ್ಜಾ ಶಕ್ತಿಯಾದ 'ಚಿ' ಕನ್ನಡಿಗೆ ಬಡಿದು ಹಿಂದಕ್ಕೆ ಹೋಗುತ್ತದೆ. ಆದರೆ ಪ್ರವೇಶ ದ್ವಾರದ ಎದುರಿನ ಗೋಡೆ ಖಾಲಿ ಇರಿಸುವುದು ಸರಿಯಲ್ಲ. ಅಲ್ಲಿ ಆಳವಾಗಿರೋದನ್ನು ಭಾಸವಾಗಿಸುವಂತೆ ಏನಾದರೂ ಇರಿಸಬೇಕಾಗುತ್ತದೆ.

ಅದಕ್ಕಾಗಿ ಕನ್ನಡಿ ಬದಲು ಯಾವುದೇ ಚಿತ್ರಗಳನ್ನು ಅಂಟಿಸಬಹುದು. ಒಂದು ಕಾಲು ಹಾದಿ, ಅಂಕು ಡೊಂಕಾದ ರಸ್ತೆ, ಅದರ ಆಳವಾಗಿ ಒಳಹೊಕ್ಕಂತೆ ಕಾಣಿಸುವ ಚಿತ್ರಗಳನ್ನು ಆ ಗೋಡೆಗೆ ಹಚ್ಚಬಹುದು. ಅಂದರೆ ಸಾಂಕೇತಿಕವಾಗಿ ಆಳದ ಭಾವನೆ ಸೃಷ್ಟಿಸುವಂಥ ಚಿತ್ರಗಳು ಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತೊಲೆಗಳು
ಒಟ್ಟು ಭೋಜನ-ಸುಖಜೀವನ
ಗಾಳಿಗಂಟೆಗಳು
ನೈಜ ವಾಸ್ತುವಿನ ನಿಯಮ
ಮಗುವಿಲ್ಲದ ಮನೆ
ಮೂರು ಕಾಲುಗಳ ಕಪ್ಪೆ
ಮನರಂಜನೆ
ಚಿತ್ರ ಸಮೀಕ್ಷೆ - ಇಡೀ ಕರ್ನಾಟಕ ದುನಿಯಾವೇ ಮುಂಗಾರು ಮಳೆಯ ಹನಿಗಳ ಲೀಲೆಯಲ್ಲಿ ಕಳೆದ ನೂರೈವತ್ತು ದಿನಗಳಿಂದ...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಸಂಪೂರ್ಣ ಧೂಮಪಾನ ನಿಷೇಧಕ್ಕೆ ಕರೆ
ಕೆಲಸ ಮಾಡುವ ಸ್ಥಳಗಳಲ್ಲಿ ಪರೋಕ್ಷ ಧೂಮಪಾನವನ್ನು ತಡೆಯುವುದಕ್ಕಾಗಿ ಸಂಪೂರ್ಣವಾಗಿ ಧೂಮಪಾನ ಮೇಲೆ ನಿಷೇಧ ಹೇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.
9 ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ರಾಮದಾಸ್ ಸಭೆ
ನೌಕಾದಳ ವೈದ್ಯಕೀಯ ತಂಡದಿಂದ ಚಿಕಿತ್ಸೆ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace